ಬಂಡೀಪುರ ಅಭಯಾರಣ್ಯದಲ್ಲಿ 10 ವರ್ಷದ ಹೆಣ್ಣು ಹುಲಿ ಸಾವು

Update: 2021-06-16 06:03 GMT

ಚಾಮರಾಜನಗರ, ಜೂ.16: ಬಂಡೀಪುರ ಅಭಯಾರಣ್ಯದಲ್ಲಿ 10 ವರ್ಷದ ಹೆಣ್ಣು ಹುಲಿಯೊಂದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಒಳಕಲ್ಲಾರೆ ಬಳಿಯ ಉಪ್ಪುನೀರುಹಳ್ಳ ಸರ್ಕಲ್ ಬಳಿಯ ಬೆಟ್ಟದ ಕಟ್ಟೆ ಬಳಿ ಹುಲಿ ಕಳೇಬರ ಪತ್ತೆಯಾಗಿದ್ದು, ಅದರ ದೇಹದಲ್ಲಿ   ಗಾಯದ ಗುರುತುಗಳು ಕಂಡುಬಂದಿದೆ. ಕಾಡುಕೋಣದ ಜೊತೆಗಿನ ಕಾದಾಟದಲ್ಲಿ ಹುಲಿ ಅಸುನೀಗಿರುವುದಾಗಿ ಶಂಕಿಸಲಾಗಿದೆ.

ಸ್ಥಳಕ್ಕೆ ಬಂಡೀಪುರ ಹುಲಿ ಯೋಜನೆಯ ನಿರ್ದೇಶಕ ನಟೇಶ್ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಡಾ. ವಾಸೀಮ್ ಹುಲಿಯ ಮರಣೊತ್ತರ ಪರೀಕ್ಷೆ ನಿರ್ವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News