ಅರುಣ್ ಸಿಂಗ್ ರಾಜ್ಯಕ್ಕೆ ಆಗಮಿಸಿದರೂ ಭೇಟಿಯಾಗದೇ ದೂರ ಉಳಿದ ಶಾಸಕ ಯತ್ನಾಳ್

Update: 2021-06-17 17:28 GMT

ಬೆಂಗಳೂರು, ಜೂ. 17: ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರ ಭೇಟಿಗೆ ನಾನು ಯಾವುದೇ ಸಮಯಾವಕಾಶವನ್ನು ಕೇಳಿಲ್ಲ ಎಂದು ವಿಜಯಪುರ ನಗರ ಕ್ಷೇತ್ರದ ಬಿಜೆಪಿಯ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಇಂದಿಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಕುರಿತು ಬಹಳ ಹಿಂದೆಯೇ ಧ್ವನಿಯೆತ್ತಿದ್ದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಉಸ್ತುವಾರಿ ರಾಜ್ಯಕ್ಕೆ ಬಂದರೂ ಭೇಟಿಯಾಗದಿರುವುದು ಕುತೂಹಲ ಮೂಡಿಸಿದೆ. ಎರಡು ದಿನಗಳಿಂದ ಅಸಮಾಧಾನಿತ ಸಚಿವರು, ಶಾಸಕ ಅಭಿಪ್ರಾಯ ಸಂಗ್ರಹಿಸುತ್ತಿರುವ ಅರುಣ್ ಸಿಂಗ್ ಅವರು, ರಾಜ್ಯಕ್ಕೆ ಆಗಮಿಸಿದರೂ ಯತ್ನಾಳ್ ದೂರ ಉಳಿದಿರುವುದು ಸಂಶಯ ಸೃಷ್ಟಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News