ಲಾಕ್‌ಡೌನ್ ವೇಳೆ ಮಹಿಳೆಯರು, ವೃದ್ಧರ ಮೇಲೆ ದೌರ್ಜನ್ಯ ಆರೋಪ: ಪಿಎಸ್ಐ ಅಮಾನತು

Update: 2021-06-20 17:51 GMT

ರಾಯಚೂರು ಜೂ. 20: ನಗರದಲ್ಲಿ ತರಕಾರಿ‌ ಮಾರುವ ಮಹಿಳೆಯರು ಮತ್ತು ವೃದ್ಧರ ಮೇಲೆ ದೌರ್ಜನ್ಯವೆಸಗಿದ ಆರೋಪದ ಮೇಲೆ ಸದರಬಜಾರ ಠಾಣೆ ಪಿಎಸ್ಐಯನ್ನು ಸೇವೆಯಿಂದ ಅಮಾನತು ಮಾಡಿ ಜಿಲ್ಲಾ ಪೊಲೀಸ್ ಅಧೀಕ್ಷಕರು ಆದೇಶಿಸಿದ್ದಾರೆ.

ಲಾಕ್ಡೌನ್ ಹಿನ್ನೆಲೆಯಲ್ಲಿ ಬಂದೋಬಸ್ತಿಗೆ ನಿಯೋಜಿಸಿದ ಪಿಎಸ್ಐ ಅಝಂ ಇವರು ಭಂಗಿಕುಂಟ ರಸ್ತೆಯಲ್ಲಿ ತರಕಾರಿ‌ ಮಾರುತ್ತಿದ್ದ ಮಹಿಳೆಯರು ಮತ್ತು ವೃದ್ಧರು ಮಾರಾಟಕ್ಕಿಟ್ಟ ತರಕಾರಿಗಳನ್ನು ಕಾಲಿನಿಂದ ಒದ್ದು ಚೆಲ್ಲಾಪಿಲ್ಲಿ ಮಾಡಿದ್ದರು. ಈ ಘಟನೆ ಮಾಧ್ಯಮಗಳಲ್ಲಿ ಪ್ರಸಾರಗೊಳ್ಳುತ್ತಿದ್ದಂತೆ ಪಿಎಸ್ಐಯನ್ನು ಅಮಾನತುಗೊಳಿಸಿ ಆದೇಶಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News