×
Ad

ಹಾಜಿ ಅಬ್ದುಲ್‌ ಅಝೀಝ್ ಜಯಪುರ ​ನಿಧನ

Update: 2021-06-22 13:09 IST

ಹಾಜಿ ಅಬ್ದುಲ್‌ ಅಝೀಝ್ ಜಯಪುರ ​ನಿಧನ 

ಚಿಕ್ಕಮಗಳೂರು, ಜೂ. 22: ಇಲ್ಲಿನ ಜಯಪುರ ನಿವಾಸಿ, ಹೊಟೇಲ್ ಉದ್ಯಮಿ, ಸಮಾಜ ಸೇವಕ ಹಾಜಿ ಅಬ್ದುಲ್‌ ಅಝೀಝ್ (57) ಸೋಮವಾರ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದೀರ್ಘಕಾಲದ ಅಸೌಖ್ಯದಿಂದ ನಿಧನರಾಗಿದ್ದಾರೆ.

ಮೃತರು ಪತ್ನಿ, ಮೂವರು ಪುತ್ರಿಯರು ಮತ್ತು ಏಕೈಕ ಪುತ್ರ ಮಲ್ನಾಡ್ ಗಲ್ಫ್ ಎಜುಕೇಶನ್ ಮತ್ತು ಚಾರಿಟೇಬಲ್ ಟ್ರಸ್ಟ್ ನ ಅಂತರ್ ರಾಷ್ಟ್ರೀಯ ಕೋ ಆರ್ಡಿನೇಟರ್, ಎಂಜಿಟಿ ದಮಾಮ್ /ಕೋಬರ್ ಅಧ್ಯಕ್ಷ ಅಬ್ದುಲ್ ಸತ್ತಾರ್ ಜಯಪುರ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಹೊಟೇಲ್ ಟೂರಿಸ್ಟ್ ಇದರ ಮಾಲಕರಾಗಿದ್ದ ಹಾಜಿ ಅಬ್ದುಲ್ ಅಝೀಝ್ ಅವರು ಚಿಕ್ಕಮಗಳೂರು ಜಿಲ್ಲೆಯ ಪ್ರಮುಖ ಸುನ್ನಿ ನಾಯಕರಲ್ಲೊಬ್ಬರಾಗಿದ್ದರು. ಮಸ್‌ದರ್ ಎಜು ಆ್ಯಂಡ್ ಚಾರಿಟಿಯ ಪ್ರಮುಖ ಹಿತೈಷಿಯಾಗಿದ್ದರು.

ಮೃತರ ಅಂತ್ಯಕ್ರಿಯೆಯನ್ನು ಜಯಪುರದಲ್ಲಿ ನೆರವೇರಿಸಲಾಯಿತು.

ಸಂತಾಪ: ಹಾಜಿ ಅಬ್ದುಲ್‌ ಅಝೀಝ್ ಅವರ ನಿಧನಕ್ಕೆ ಮಲ್ನಾಡ್ ಗಲ್ಫ್ ಎಜುಕೇಶನ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ್‌ನ ಪದಾಧಿಕಾರಿಗಳು, ಸದಸ್ಯರು ಸಂತಾಪ ಸೂಚಿಸಿದ್ದಾರೆ. ಸಾಮಾಜಿಕ, ಧಾರ್ಮಿಕ ರಂಗದ ಧುರೀಣರಾಗಿದ್ದ ಅಝೀಝ್ ಅವರ ನಿಧನ ಸಮುದಾಯಕ್ಕೆ ತುಂಬಲಾರದ ನಷ್ಟ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News