ಜೂ.28ರಿಂದ ವಿಧಾನಮಂಡಲ ಸಮಿತಿ ಸಭೆಗಳನ್ನು ನಡೆಸಲು ಸ್ಪೀಕರ್ ಅನುಮತಿ

Update: 2021-06-22 13:45 GMT

ಬೆಂಗಳೂರು, ಜೂ.22: ರಾಜ್ಯದಲ್ಲಿ ಕೊರೋನ ಸೋಂಕು ಇಳಿಕೆಯಾಗಿರುವುದರಿಂದ ಹಾಗೂ ಲಾಕ್‍ಡೌನ್ ಸಡಿಲಗೊಂಡಿರುವುದರಿಂದ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು, ಕೋವಿಡ್-19ರ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲನೆ ಮಾಡಿ, ವಿಧಾನಮಂಡಲ/ವಿಧಾನಸಭೆಯ ಎಲ್ಲ ಸಮಿತಿಗಳ ಸಭೆಗಳನ್ನು ಜೂ.28ರಿಂದ ಪ್ರಾರಂಭಿಸಲು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅನುಮತಿಸಿದ್ದಾರೆ ಎಂದು ವಿಧಾನಸಭೆಯ ಕಾರ್ಯದರ್ಶಿ ಎಂ.ಕೆ.ವಿಶಾಲಾಕ್ಷಿ ತಿಳಿಸಿದ್ದಾರೆ.

ಮುಂದುವರಿದು, ಎಲ್ಲ ಸಮಿತಿಗಳು ಮುಂದಿನ ಆದೇಶದವರೆಗೆ ರಾಜ್ಯದೊಳಗೆ ಅಥವಾ ಹೊರ ರಾಜ್ಯಗಳಲ್ಲಿ ಯಾವುದೆ ಅಧ್ಯಯನ ಪ್ರವಾಸ ಹಾಗೂ ಸ್ಥಳೀಯವಾಗಿ ಯಾವುದೆ ಭೇಟಿ, ಸ್ಥಳ ಪರಿಶೀಲನೆ ಕೈಗೊಳ್ಳಬಾರದೆಂದು ಸ್ಪೀಕರ್ ಆದೇಶಿಸಿದ್ದಾರೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News