×
Ad

ಡಿ.ಕೆ.ಶಿವಕುಮಾರ್ ರನ್ನು ಭೇಟಿಯಾದ ಲಿಂಗಾಯತ, ಹಿಂದುಳಿದ ವರ್ಗಗಳ 25 ಮಠಗಳ ಸ್ವಾಮೀಜಿಗಳು

Update: 2021-06-28 21:36 IST

ಬೆಂಗಳೂರು, ಜೂ.28: ಗದಗದ ಬಾಲೆ ಹೊಸೂರು ಮಠದ ದಿಂಗಾಲೇಶ್ವರ ಸ್ವಾಮೀಜಿ, ವಿಜಯಪುರದ ಬಸವಕುಮಾರ ಸ್ವಾಮೀಜಿ ಅವರ ನೇತೃತ್ವದಲ್ಲಿ ಉತ್ತರ ಕರ್ನಾಟಕದ ಲಿಂಗಾಯತ ಹಾಗೂ ಹಿಂದುಳಿದ ವರ್ಗಗಳ 25 ಮಠಗಳ ಸ್ವಾಮೀಜಿಗಳು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಬೆಂಗಳೂರಿನ ಸದಾಶಿವನಗರದ ನಿವಾಸದಲ್ಲಿ ಸೋಮವಾರ ಭೇಟಿ ಮಾಡಿ, ಸಮಾಲೋಚನೆ ನಡೆಸಿದರು.

ಹಡಪದ ಗುರುಪೀಠ, ರೆಡ್ಡಿ ಗುರುಪೀಠ, ಬಳ್ಳಾರಿ ಕಲ್ಯಾಣಮಠ, ಭೋವಿ ಗುರುಪೀಠ, ಈಡಿಗ ಗುರುಪೀಠ, ಕಡಕೋಳ ಮಠ, ಅಕ್ಕಲಕೂಟ, ಗಡಿಗೌಡಗಾಂವ, ಉಗುರಗೋಳ, ಬೊಮ್ಮನಹಳ್ಳಿ ಮಠ, ಗೋಟೂರ ಮಠ, ಅಗಡಿ ಮಠ, ಸದಾಶಿವಪೇಟೆ ಮತ್ತಿತರ ಮಠಗಳು ಶ್ರೀಗಳು ಉಪಸ್ಥಿತರಿದ್ದು, ಆಶೀರ್ವದಿಸಿದರು. ಅಲ್ಲದೆ, ಕೋವಿಡ್ ಸಂಕಷ್ಟ ಪರಿಸ್ಥಿತಿಯಲ್ಲಿ ಉತ್ತಮವಾಗಿ ಕೆಲಸ ಮಾಡುತ್ತಿದ್ದೀರಿ ಎಂದು ಡಿಕೆಶಿ ಕಾರ್ಯಕ್ಕೆ ಶ್ಲಾಘಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News