ಟ್ರ್ಯಾಕ್ಟರ್ ಅವಘಡ: ಪ್ರತ್ಯೇಕ ಪ್ರಕರಣದಲ್ಲಿ ಶಿವಮೊಗ್ಗದಲ್ಲಿ ಇಬ್ಬರು ಮೃತ್ಯು

Update: 2021-07-02 18:02 GMT

ಶಿವಮೊಗ್ಗ(ಜು.3): ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಸಿದ್ಲೀಪುರ ಗ್ರಾಮದಲ್ಲಿ ಉಳುಮೆ ಮಾಡುವಾಗ ಟ್ರ್ಯಾಕ್ಟರ್ ಮಗುಚಿ ಬಿದ್ದು ರೈತ ಮೃತಪಟ್ಟಿದ್ದಾರೆ.

ಸಿದ್ಲಿಪುರದ ಕೆಂಚಪ್ಪ (48) ಮೃತಪಟ್ಟಿರುವ ರೈತ. ಜಮೀನು ಉಳುಮೆ ಮಾಡುವಾಗ ಕೆಂಚಪ್ಪ ಅವರು ಟ್ರ್ಯಾಕ್ಟರ್ ಅನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿದಾಗ ಟ್ರ್ಯಾಕ್ಟರ್ ಮಗುಚಿ ಬಿದ್ದು ಅವರ ತಲೆಗೆ ಮತ್ತು ಮೈ ಕೈ ಗೆ ತೀವ್ರ ಗಾಯಗಳಾಗಿ ಮೃತಪಟ್ಟಿದ್ದಾರೆ. ಮೃತರ ಮಗ ಮೋಹನ್ ಕುಮಾರ್ ಅವರು ದೂರು ನೀಡಿದ್ದಾರೆ.

ಟ್ರ್ಯಾಕ್ಟರ್ ನಿಂದ ಬಿದ್ದು ಸಾವು

ಟ್ರ್ಯಾಕ್ಟರ್ ಮಡ್ ಗಾರ್ಡ್ ಮೇಲೆ ಕುಳಿತಿದ್ದ ವ್ಯಕ್ತಿಯೊಬ್ಬರು ಕೆಳಗೆ ಬಿದ್ದು ಮೃತಪಟ್ಟಿದ್ದು, ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕುಂಸಿ ಗ್ರಾಮದ ಶಾಂತಪ್ಪ(75) ಎಂಬವರೇ ಮೃತಪಟ್ಟಿರುವ ವ್ಯಕ್ತಿ. ಟ್ರ್ಯಾಕ್ಟರ್  ಚಾಲಕ ಪವನ್ ಕುಮಾರ್ ಅವರು ರಾಗಿಹೊಸಳ್ಳಿ ಹೋಗುವ ರಸ್ತೆಯಲ್ಲಿ ಟ್ರ್ಯಾಕ್ಟರನ್ನು ಅತಿ ವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿದ್ದಾರೆ. ಆಗ ಟ್ರ್ಯಾಕ್ಟರ್ ನಿಂದ ಬಿದ್ದು ಗಾಯಗೊಂಡಿದ್ದ ಶಾಂತಪ್ಪ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News