ತುಮಕೂರು: ಕೊಲೆ ಪ್ರಕರಣದ ಆರೋಪಿ ಬಂಧನ
Update: 2021-07-04 18:00 GMT
ತುಮಕೂರು, ಜು.4: ಹೆಬ್ಬೂರು ಪೊಲೀಸ್ ಠಾಣಾ ವ್ಯಾಪ್ತಿಯ ವಡ್ಡರಹಳ್ಳಿ ಎ.ಕೆ.ಕಾವಲ್ ಹಟ್ಟಿಮಾರಮ್ಮ ದೇವಾಲಯದ ಬಳಿ ನಡೆದ ಯುವಕನೊಬ್ಬನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ವಡ್ಡರಹಳ್ಳಿಯ ಲಕ್ಷ್ಮಯ್ಯ ಎಂಬವರ ಮಗ ದಿನೇಶ್ (20) ಎಂದು ಗುರುತಿಸಲಾಗಿದೆ. ಜು.1ರ ಮಧ್ಯಾಹ್ನ ಗಂಗನರಸಯ್ಯ ಎಂಬವರ ಮಗ ಸಿದ್ದರಾಜು ಮತ್ತು ಲಕ್ಷ್ಮಯ್ಯ ಅವರ ಮಗ ದಿನೇಶ್ ಕೈಯಲ್ಲಿ ಲಾಂಗು ಹಿಡಿದುಕೊಂಡು ಜಗಳ ಮಾಡುತ್ತಿದ್ದ ವೇಳೆ ಸ್ಥಳೀಯರು ಜಗಳ ಬಿಡಿಸಿ ಕಳುಹಿಸಿದ್ದರು. ಗಾಯಗೊಂಡಿದ್ದ ಸಿದ್ದರಾಜು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದ. ಈ ಸಂಬಂಧ ಹೆಬ್ಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಹುಡುಕಾಟ ನಡೆಸಿದ್ದ ಕ್ಯಾತ್ಸಂದ್ರ ಠಾಣೆಯ ವೃತ್ತ ನಿರೀಕ್ಷಕ ಚನ್ನೇಗೌಡ ನೇತೃತ್ವದ ತಂಡ ಜು.2ರ ರಾತ್ರಿ 10 ಗಂಟೆಯಲ್ಲಿ ಆರೋಪಿ ದಿನೇಶ್ನನ್ನು ಗೂಳೂರು ಬಸ್ ನಿಲ್ದಾಣದ ಬಳಿ ಬಂಧಿಸಿದ್ದಾರೆ.