ಬಿಜೆಪಿ ಹುಟ್ಟಿಕೊಂಡಿದ್ದೇ ಹಲ್ಲೆ, ಕೊಲೆ, ಗಲಭೆಗಳಿಂದ: ಡಿಕೆಶಿ ವಿಚಾರದಲ್ಲಿ ಕಾಂಗ್ರೆಸ್ ತಿರುಗೇಟು

Update: 2021-07-10 12:44 GMT

ಬೆಂಗಳೂರು, ಜು. 10: `ಸಾರ್ವಜನಿಕ ಬದುಕಿನಲ್ಲಿರುವವರಿಗೆ ಸಾರ್ವಜನಿಕ ಸ್ಥಳದಲ್ಲಿ ಕಿರಿಕಿರಿ ಉಂಟಾಗುವುದು ಸಹಜ. ತಮ್ಮದೇ ಡ್ರೈವರ್ ಮೇಲೆ ಮಾದ್ಯಮದವರೆದುರು ಹಲ್ಲೆ ನಡೆಸಿದ ಬಿ.ಎಸ್.ಯಡಿಯೂರಪ್ಪ ಅವರು ಭೂಗತ ಪಾತಕಿ ದಾವೂದ್ ಇಬ್ರಾಹಿಂನಿಂದ ಟ್ರೈನಿಂಗ್ ತೆಗೆದುಕೊಂಡಿದ್ದರೇ? ಬಿಜೆಪಿ ಉತ್ತರಿಸಬೇಕು! ಬಿಜೆಪಿ ಹುಟ್ಟಿಕೊಂಡಿದ್ದೇ ಹಲ್ಲೆ, ಕೊಲೆ, ಗಲಭೆಗಳಿಂದ' ಎಂದು ಕಾಂಗ್ರೆಸ್ ಆರೋಪಿಸಿದೆ.

ಶನಿವಾರ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, `ಬಿಜೆಪಿ ಶಾಸಕ ಸಿದ್ದು ಸವದಿ ದಲಿತ ಮಹಿಳಾ ಜನಪ್ರತಿನಿಧಿಯನ್ನು ಸಾರ್ವಜನಿಕವಾಗಿ ಎಳೆದಾಡಿ ಹಲ್ಲೆ ನಡೆಸಿದ ಪರಿಣಾಮ ಆ ಮಹಿಳೆಗೆ ಗರ್ಭಪಾತವಾಗಿ ಒಂದು ಕೊಲೆಗೆ ಕಾರಣರಾಗಿದ್ದರು. `ಗೂಂಡಾಗಿರಿಯ ಪಾಠಶಾಲೆ' ಆಗಿರುವ ಬಿಜೆಪಿ ಇದು ಬಸವಣ್ಣನ ನಾಡು, ಇಲ್ಲಿ ನಿಮ್ಮ ದಾದಾಗಿರಿ ನಡೆಯದು ಎಂಬುದನ್ನ ಅರ್ಥ ಮಾಡಿಕೊಂಡರೆ ಒಳಿತು' ಎಂದು ಸಲಹೆ ನೀಡಿದೆ.

ರಾಜ್ಯಾದ್ಯಂತ ಲಸಿಕಾ ಕೇಂದ್ರಗಳಲ್ಲಿ `ನೋ ವ್ಯಾಕ್ಸಿನ್' ಬೋರ್ಡ್. ರಾಜರಾಜೇಶ್ವರಿ ನಗರ(ಆರ್‍ಆರ್ ನಗರ)ದ ಶಾಸಕ ಮುನಿರತ್ನರಿಂದ ಮತದಾರರಿಗೆ ಲಸಿಕೆ ಆಮಿಷ. ಸರಕಾರಕ್ಕೆ ಸಿಗದ ಲಸಿಕೆ ಬಿಜೆಪಿ ಶಾಸಕರಿಗೆ ಹೇಗೆ ಸಿಗುತ್ತಿದೆ? ಬಿಜೆಪಿ ಸರಕಾರದಲ್ಲಿ ಸರಕಾರಿ ಲಸಿಕೆಗಳನ್ನು ವ್ಯಾಕ್ಸಿನ್ ಬ್ಲಾಕಿಂಗ್ ದಂಧೆ ಮೂಲಕ ತಮ್ಮವರಿಗೆ ಹಂಚುತ್ತಿದೆ, ಈ ಬಗ್ಗೆ ಸಮಗ್ರ ತನಿಖೆಯಾಗಬೇಕು

-ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News