ವಿದ್ಯುತ್ ಸ್ಪರ್ಶದಿಂದ 5 ವರ್ಷದ ಬಾಲಕ ಮೃತ್ಯು

Update: 2021-07-10 17:49 GMT

ಮಂಡ್ಯ, ಜು.10: ವಿದ್ಯುತ್ ಸ್ಪರ್ಶದಿಂದ 5 ವರ್ಷದ ಬಾಲಕನೋರ್ವ ಸಾವನ್ನಪ್ಪಿರುವ ಘಟನೆ ತಾಲೂಕಿನ ಸಂತೇಕಸಲಗೆರೆ ಗ್ರಾಮದಲ್ಲಿ ಶನಿವಾರ ಬೆಳಗ್ಗೆ ನಡೆದಿದೆ.

ರಾಜ್ಯ ಯುವ ಪ್ರಶಸ್ತಿ ವಿಜೇತ, ಕಲಾವಿದ ಎಸ್.ಬಸವರಾಜು ಅವರ ಪುತ್ರ ಬಿ.ಶರತ್‍ಕುಮಾರ್ ಮೃತ ಬಾಲಕ. ಈತ ತನ್ನ ತಾಯಿ ಜತೆ ತೋಟಕ್ಕೆ ತೆರಳಿದ್ದಾಗ ಈ ಅವಘಡ ಸಂಭವಿಸಿದೆ.

ಜಮೀನು ಬಳಿ ನೀರು ಪಂಪ್‍ಸೆಟ್‍ಗೆ ಅಳವಡಿಸಿದ್ದ ವೈರ್ ಮಗುವಿನ ಕಾಲಿಗೆ ತಗಲಿ ವಿದ್ಯುತ್ ಸ್ಪರ್ಶವಾಗಿ ತೀವ್ರ ಅಸ್ವಸ್ಥಗೊಂಡಿದ್ದಾನೆ. ತಕ್ಷಣ ಆಸ್ಪತ್ರೆಗೆ ರವಾನಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.

ಈ ಸಂಬಂಧ ಗ್ರಾಮಾಂತರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News