ಮೈಸೂರು: ಕೆಲಸ ಸಿಗದೆ ಮನನೊಂದು ವ್ಯಕ್ತಿ ಆತ್ಮಹತ್ಯೆ
Update: 2021-07-12 16:28 GMT
ಮೈಸೂರು,ಜು.12: ವ್ಯಕ್ತಿಯೋರ್ವ ಕೆಲಸ ಸಿಗದೇ ಬೇಸರಗೊಂಡು ನೇಣಿಗೆ ಶರಣಾದ ಘಟನೆ ಮೈಸೂರಿನಲ್ಲಿ ನಡೆದಿದೆ.
ನೇಣಿಗೆ ಶರಣಾದ ವ್ಯಕ್ತಿಯನ್ನು ಗಾಂಧಿನಗರ ನಿವಾಸಿ ಮಹೇಶ್(40) ಎಂದು ಗುರುತಿಸಲಾಗಿದೆ. ಈತ ಗಾರೆ ಕೆಲಸ ಮಾಡಿಕೊಂಡಿದ್ದರು. ವಿಪರೀತ ಮದ್ಯ ಸೇವಿಸುತ್ತಿದ್ದ. ಲಾಕ್ ಡೌನ್ ನಂತರ ಎಲ್ಲೂ ಕೆಲಸ ಸಿಗದೆ ಮನನೊಂದಿದ್ದ.
ತಾಯಿ ಸಿದ್ದಮ್ಮ ಮನೆಯಿಂದ ಹೊರ ಹೋಗಿದ್ದ ವೇಳೆ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಸಂಬಂಧ ಎನ್ ಆರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.