ಶಿವಮೊಗ್ಗ: ಅಕ್ರಮ ಗೋ ಸಾಗಾಟ ಆರೋಪ; ಓರ್ವನ ಬಂಧನ

Update: 2021-07-12 16:36 GMT

ಶಿವಮೊಗ್ಗ( ಜು.12): ಗೋವುಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ವ್ಯಕ್ತಿಯನ್ನು ಬಂಧಿಸಿ, ಗೋವುಗಳನ್ನು ರಕ್ಷಿಸಿರುವ ಘಟನೆ ಮಳಲಿಕೊಪ್ಪ ಕ್ರಾಸ್ ಸಮೀಪ ಭಾನುವಾರ ನಡೆದಿದೆ. 

ವಾದಿ ಏ ಹುದಾ ನಿವಾಸಿ ಮೆಹತಾಬ್ ಅಹಮ್ಮದ್(40) ಎಂಬುವವರನ್ನು ಬಂಧಿಸಲಾಗಿದೆ. ಮಂಡಗದ್ದೆ ಭಾಗದಿಂದ ಗೋವುಗಳನ್ನು ಕರೆದುಕೊಂಡು ಬರುತ್ತಿರುವುದಾಗಿ ಆರೋಪಿ ತಿಳಿಸಿದ್ದು, ಪರವಾನಗಿ ಇರಲಿಲ್ಲ. ಹೀಗಾಗಿ, ಮೆಹತಾಬ್‌ನನ್ನು ಬಂಸಲಾಗಿದೆ. ಐದು ಗೋವುಗಳನ್ನು ಹೊಳೆ ಬಸ್ ನಿಲ್ದಾಣದ ಬಳಿಯ ಗೋಶಾಲೆಗೆ ಕಳುಹಿಸಲಾಗಿದೆ. ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News