ರೌಡಿ ಬಬ್ಲಿ ಕೊಲೆ ಪ್ರಕರಣ: ಏಳು ಮಂದಿ ಬಂಧನ

Update: 2021-07-27 18:51 GMT

ಬೆಂಗಳೂರು, ಜು.27: ಆಡುಗೋಡಿ ರೌಡಿ ಬಬ್ಲಿ ಕೊಲೆ ಪ್ರಕರಣ ಸಂಬಂಧ ಏಳು ಮಂದಿಯನ್ನು ಕೋರಮಂಗಲ ಠಾಣಾ ಪೆÇಲೀಸರು ಬಂಧಿಸಿದ್ದಾರೆ.

ಆಡುಗೋಡಿಯ ಗಣೇಶ್, ಅಲ್ಫಾನ್ ಸೊ, ಪ್ರವೀಣ್, ಪಲ್ಲಾರವಿ, ಸೋಮಶೇಖರ್, ಸಾಲೊಮಾನ್, ಉದಯ್ ಕುಮಾರ್ ಬಂಧಿತ ಆರೋಪಿಗಳಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಆರೋಪಿಗಳು ಹಾಡಗಲೇ ಬ್ಯಾಂಕ್‍ನೊಳಗೆ ನುಗ್ಗಿ ರೌಡಿಶೀಟರ್ ಬಾಬ್ಲಿಯನ್ನು ಕೊಲೆ ಮಾಡಿದ್ದರು. ಪ್ರಕರಣ ಸಂಬಂಧ ಮೊದಲು ಇಬ್ಬರು ಆರೋಪಿಗಳನ್ನು ಬಂಧಿಸಿದ್ದ ಪೊಲೀಸರು, ತನಿಖೆ ಮುಂದುವರಿಸಿ ಇದೀಗ ಏಳು ಮಂದಿಯನ್ನು ಸೆರೆ ಹಿಡಿದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News