ಜೆಡಿಎಸ್ ಬಗ್ಗೆ ಅನಂತಕುಮಾರ್ ಪುತ್ರಿಯ ಟ್ವೀಟ್ ಗೆ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದು ಹೀಗೆ...

Update: 2021-07-29 15:03 GMT

ಬೆಂಗಳೂರು: 'ಕರ್ನಾಟಕದ ರಾಜಕೀಯ ನಿಜವಾಗಿಯೂ ಏಕೆ ಆಸಕ್ತಿದಾಯಕವಾಗಿದೆ? ಜೆಡಿಎಸ್ ಇನ್ನೂ ಬಲವಾದ ರಾಜಕೀಯ ಶಕ್ತಿಯಾಗಿದೆ' ಎಂದು ಮಾಜಿ ಕೇಂದ್ರದ ಸಚಿವ, ಬಿಜೆಪಿಯ ಹಿರಿಯ ನಾಯಕರಾಗಿದ್ದ ಅನಂತ ಕುಮಾರ್ ಪುತ್ರಿ ವಿಜೇತ ಅವರ ಟ್ವೀಟ್ ಗೆ ಮಾಜಿ ಸಿಎಂ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ. 

ಪಕ್ಷದ ಕಚೇರಿ ಜೆಪಿ ಭವನದಲ್ಲಿ ಗುರುವಾರ ಮಧ್ಯಾಹ್ನ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಅನಂತ್‍ಕುಮಾರ್ ಅವರ ಪುತ್ರಿ ಜೆಡಿಎಸ್ ಪಕ್ಷದ ಬಗ್ಗೆ ಉತ್ಸಾಹ ತುಂಬುವ ಮಾತನಾಡಿದ್ದಾರೆ. ಜೆಡಿಎಸ್ ಇನ್ನೂ ಸಹ ಕರ್ನಾಟಕದಲ್ಲಿ ಇದೆ ಅನ್ನೋದನ್ನು ಹೇಳಿದ್ದಾರೆ. ಅವರ ತಾಯಿ ತಮ್ಮ ಪಕ್ಷಕ್ಕೆ ಬಂದರೆ ಆತ್ಮೀಯವಾಗಿ ಸ್ವಾಗತಿಸುತ್ತೇವೆ. ಅವರು ನಮ್ಮ ಪಕ್ಷಕ್ಕೆ ಬಂದರೆ ತುಂಬಾ ಸಂತೋಷ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. 

ಜೆಡಿಎಸ್‍ಗೆ ಬಂದರೆ ಸರಿಯಾದ ಸ್ಥಾನಮಾನ: ಎಚ್.ಡಿ.ಕುಮಾರಸ್ವಾಮಿ 

‘ಬಿಜೆಪಿ ಪಕ್ಷದಲ್ಲಿ ತೇಜಸ್ವಿನಿ ಅನಂತಕುಮಾರ್ ಅವರಿಗೆ ಸರಿಯಾದ ಸ್ಥಾನಮಾನ ಸಿಗಲಿಲ್ಲ. ಅವರು ಜೆಡಿಎಸ್‍ಗೆ ಬಂದರೆ ಸರಿಯಾದ ಸ್ಥಾನಮಾನ ಕೊಡುತ್ತೇವೆ.’

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News