ಯಾದಗಿರಿ: ಮನೆ ಮುಂದೆ ನಿಲ್ಲಿಸಿದ್ದ ಎರಡು ಬೈಕ್‌ಗಳಿಗೆ ಬೆಂಕಿ

Update: 2021-07-29 15:34 GMT

ಯಾದಗಿರಿ: ಸುರಪುರ ನಗರದ ವ್ಯಾಪಾರಿ ಪ್ರಕಾಶಚಂದ್ ಜೈನ್ ಎನ್ನುವವರ ಮನೆಯ ಮುಂದೆ ನಿಲ್ಲಿಸಿದ್ದ ಎರಡು ಬೈಕ್‌ಗಳಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿರುವ ಘಟನೆ ಬುಧವಾರ ರಾತ್ರಿ ನಡೆದಿದೆ.ರಾತ್ರಿ ವೇಳೆಯಲ್ಲಿ ಎಲ್ಲರು ಮಲಗಿದ ಮೇಲೆ ಕಿಡಿಗೇಡಿಗಳು ಬೈಕ್‌ಗಳಿಗೆ ಬೆಂಕಿ ಹಚ್ಚಿದ್ದು ಎರಡೂ ಬೈಕ್‌ಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿವೆ.

ಈ ಕುರಿತು ಪೊಲೀಸ್ ಇನ್ ಸ್ಪೆಕ್ಟರ್ ಸುನೀಲ್‌ಕುಮಾರ ಮೂಲಿಮನಿಯವರು ವಿವರಣೆ ನೀಡಿ, ನಗರದ ಜೈನ್ ಮಂದಿರ ಬಳಿಯಲ್ಲಿನ ಪ್ರಕಾಶಚಂದ್ ಜೈನ್ ಎನ್ನುವವರ ಮನೆಯ ಮುಂದೆ ನಿಲ್ಲಿಸಿದ್ದ ಎರಡು ಬೈಕ್‌ಗಳಿಗೆ ಬೆಂಕಿ ಹಚ್ಚಲಾಗಿದೆ.

ಬುಧವಾರ ರಾತ್ರಿ 1 ಗಂಟೆಯ ವೇಳೆ ಘಟನೆ ನಡೆದಿರಬಹುದು ಎನಿಸುತ್ತಿದೆ. ದುಷ್ಕರ್ಮಿಗಳು ಪೆಟ್ರೋಲ್ ಕದಿಯಲ್ಲು ಬಂದು ಘಟನೆ ನಡೆದಿರಬಹುದು ಅಥವಾ ಶಾರ್ಟ್ ಸರ್ಕ್ಯೂಟ್ ಎನಾದರು ಆಗಿದೆಯಾ ಎನ್ನುವುದರ ಬಗ್ಗೆ ಪರಿಶೀಲನೆ ಮಾಡಬೇಕಿದೆ. ಈಗಾಗಲೇ ವಾಹನದ ಮಾಲೀಕರಿಗೆ ಕರೆಯಿಸಲಾಗುತ್ತಿದ್ದು,ನಂತರ ತನಿಖೆ ನಡೆಸಲಾಗುವುದು ಆದರೆ ಈವರೆಗೆ ಇನ್ನೂ ದೂರು ನೀಡಿರುವುದಿಲ್ಲ ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News