ಈಶ್ವರಪ್ಪರನ್ನು ಹಿಂದೆಯೇ ಉಳಿಯುವಂತೆ ಕಟೀಲ್ ಮಾಡಿದ್ದಾರೆ: ಕಾಂಗ್ರೆಸ್

Update: 2021-07-30 17:39 GMT

ಬೆಂಗಳೂರು, ಜು.30: ಬಿ.ಎಸ್.ಯಡಿಯೂರಪ್ಪ ನಂತರ ಬಿಜೆಪಿಯಲ್ಲಿ ಹಿರಿತನದ ಸ್ಥಾನದಲ್ಲಿರುವುದು ಕೆ.ಎಸ್.ಈಶ್ವರಪ್ಪ. ಪಾಪ ಸಿಎಂ ಆಗುವ ಕನಸಿನಲ್ಲಿದ್ದ ಈಶ್ವರಪ್ಪನವರು ಬಿಜೆಪಿಯಲ್ಲಿ ಈಗ ಸಚಿವ ಸ್ಥಾನಕ್ಕೂ ಬೇಡಿಕೊಳ್ಳುವ ಸ್ಥಿತಿ ಒದಗಿರುವುದು ವಿಷಾದನೀಯ.

ಮೀರ್‍ಸಾದಿಕ್ ನಳಿನ್‍ಕುಮಾರ್ ಕಟೀಲ್ ಸಂಘದ ಅಣತಿಯಂತೆ ಹಿಂದುಳಿದ ವರ್ಗದ ಈಶ್ವರಪ್ಪರನ್ನು ಹಿಂದೆಯೇ ಉಳಿಯುವಂತೆ ಮಾಡಿದ್ದಾರೆ ಎಂದು ಕಾಂಗ್ರೆಸ್ ಟ್ವೀಟ್ ಮೂಲಕ ಟೀಕಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News