ಸಚಿವ ಸಂಪುಟದಲ್ಲಿ ಸ್ಥಾನ‌ ಕೊಟ್ಟರೆ ಪ್ರಾಮಾಣಿಕವಾಗಿ ಕೆಲಸ ಮಾಡುವೆ: ಶಾಸಕ‌ ಹರತಾಳು ಹಾಲಪ್ಪ

Update: 2021-07-31 11:52 GMT

ಶಿವಮೊಗ್ಗ: ನೂತನ‌ ಸಚಿವ ಸಂಪುಟದಲ್ಲಿ ಸ್ಥಾನ‌ ಕೊಟ್ಟರೆ ಪ್ರಾಮಾಣಿಕವಾಗಿ ಕೆಲಸ ಮಾಡುವೆ. ಇಲ್ಲದಿದ್ದರೆ ಶಾಸಕನಾಗಿ ಕೆಲಸ‌ ಮಾಡುವೆ ಎಂದು ಶಾಸಕ‌ ಹರತಾಳು ಹಾಲಪ್ಪ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಹೈಕಮಾಂಡ್ ಮತ್ತು ಯಡಿಯೂರಪ್ಪ ಇಬ್ಬರೂ ಪ್ರಬಲರಾಗಿದ್ದಾರೆ. ಅವರಿಗೆ ಎಲ್ಲರ ಕೆಲಸ, ಅಂಕಿ ಅಂಶಗಳು ಗೊತ್ತು. ಹೀಗಿದ್ದಲ್ಲಿ ಸಚಿವ ಸ್ಥಾನಕ್ಕೆ ಯಾವ ಲಾಬಿ ಮಾಡುವ ಅವಶ್ಯಕತೆ ಇಲ್ಲ. ಹಾಗಾಂತ ಸಚಿವ ಸ್ಥಾನದ ಆಸೆ ಇಲ್ಲ ಅಂತ ಅಲ್ಲ ಎಂದರು.

ಪಕ್ಷದ ಹಿರಿಯರು ಸಂಪುಟ ಸೇರುವುದಿಲ್ಲ ಎಂಬ ಮಾಧ್ಯಮಗಳ ವರದಿ.ಇದು ನಿಜವಾದರೆ ನಮ್ಮಂತವರಿಗೆ ಸಂಪುಟದಲ್ಲಿ ಸ್ಥಾನ ಸಿಗಬಹುದು.ರಾಜ್ಯದಲ್ಲಿ ಅನೇಕ ನಾಯಕರಿದ್ದಾರೆ. ಶಿವಮೊಗ್ಗದಲ್ಲಿ ಅರಗ ಜ್ನಾನೇಂದ್ರ ಮತ್ತು ನಾನೀದ್ದೇನೆ. ಪಕ್ಷ ಅವಕಾಶ ಮಾಡಿಕೊಟ್ಟರೆ ಸಂಪುಟದಲ್ಲಿ ಕೆಲಸ‌ ಮಾಡುತ್ತೇವೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News