ವ್ಯಸನಮುಕ್ತ ದಿನಾಚರಣೆ ಸರಕಾರಿ ಕಾರ್ಯಕ್ರಮವಾಗಲಿ: ಬಸವರಾಜ ಹೊರಟ್ಟಿ

Update: 2021-08-01 15:45 GMT

ಬಾಗಲಕೋಟೆ, ಆ.1: ಇಳಕಲ್ಲಿನ ಡಾ.ವಿಜಯ ಮಹಾಂತಶ್ರೀಗಳ ಜನ್ಮದಿನವಾದ ಆ.1ನ್ನು ರಾಜ್ಯಾದ್ಯಂತ ವ್ಯಸನಮುಕ್ತ ದಿನವನ್ನಾಗಿ ಸರಕಾರದಿಂದಲೇ ಆಚರಿಸುವಂತಾಗಬೇಕೆಂದು ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದ್ದಾರೆ.

ರವಿವಾರ ಇಲಕಲ್ಲಿನ ಚಿತ್ತರಗಿ ಶ್ರೀ ವಿಜಯ ಮಹಾಂತೇಶ ಅನುಭವ ಮಂಟಪದಲ್ಲಿ ರಾಜ್ಯ ಮದ್ಯಪಾನ ಮಂಡಳಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಸಹಯೋಗದಲ್ಲಿ ರಾಜ್ಯಮಟ್ಟದ ವ್ಯಸನಮುಕ್ತ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವ್ಯಸನಮುಕ್ತ ಸಮಾಜ ನಿರ್ಮಾಣ ಮಾಡುವಲ್ಲಿ ಇಲಕಲ್ಲಿನ ಡಾ.ಮಹಾಂತ ಶ್ರೀಗಳ ಮಠ ರಾಜ್ಯಕ್ಕೆ ಮಾದರಿಯಾಗಿದೆ. ಶ್ರೀಗಳ ಕಾರ್ಯದ ಮೂಲಕ ರಾಜ್ಯದಲ್ಲೇ ಇಳಕಲ್ ಶ್ರೀಮಠ ಹಾಗೂ ಸ್ವಾಮೀಜಿಗಳು ಹೆಸರು ಗಳಿಸಿದ್ದಾರೆ ಎಂದು ಹೇಳಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News