ನಮ್ಮನ್ನು ವಲಸಿಗರು, ಬಾಂಬೆ ಬಾಯ್ಸ್ ಎಂದು ಕರೆಯುವುದನ್ನು ನಿಲ್ಲಿಸಬೇಕು: ಬಿ.ಸಿ ಪಾಟೀಲ್

Update: 2021-08-01 16:45 GMT

ಬೆಂಗಳೂರು, ಆ.1: ನಮ್ಮನ್ನು ವಲಸಿಗರು, ಬಾಂಬೆ ಬಾಯ್ಸ್ ಎಂದು ಕರೆಯವುದನ್ನು ನಿಲ್ಲಿಸಬೇಕು ಎಂದು ಬಿಜೆಪಿ ಶಾಸಕ ಬಿ.ಸಿ.ಪಾಟೀಲ್ ಹೇಳಿದರು.

ರವಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆದಷ್ಟು ಬೇಗ ಸಂಪುಟ ವಿಸ್ತರಣೆ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಆದರೆ, ಮಂತ್ರಿಗಿರಿ ಯಾರಿಗೆ ಕೊಡಬೇಕು ಎಂಬುವುದು ಅವರಿಗೆ ಬಿಟ್ಟ ವಿಚಾರ ಎಂದರು.

ನಮ್ಮನ್ನು ವಲಸಿಗರು ಹಾಗೂ ಬಾಂಬೆ ಬಾಯ್ಸ್ ಪದ ಬಳಕೆ ನಿಲ್ಲಿಸಬೇಕು ಎಂದ ಅವರು, ನನಗೆ ಮಂತ್ರಿಗಿರಿ ಹಾಗು ಖಾತೆ ನೀಡುವ ಬಗ್ಗೆ ಮುಖ್ಯಮಂತ್ರಿ ನಿರ್ಧಾರ ಮಾಡುತ್ತಾರೆ ಎಂದು ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News