ಸಚಿವ ಸಂಪುಟ ವಿಸ್ತರಣೆ: ರಾಜ್ಯದ ಜನರ ಪಾಲಿಗೆ ಇದು ಪ್ರಾಣ ಸಂಕಟವಾಗಿದೆ; ದಿನೇಶ್ ಗುಂಡೂರಾವ್
ಬೆಂಗಳೂರು, ಆ. 2: `ಬಿಜೆಪಿ ಹೈಕಮಾಂಡ್ಗೆ ರಾಜ್ಯದ ಜನರ ಬಗ್ಗೆ ಕೊಂಚವಾದರೂ ಕನಿಕರವಿದ್ದರೆ, ಈ ಸಚಿವ ಸಂಪುಟ ರಚನೆ ಎಂಬ ಸರ್ಕಸ್ನ್ನು ಬೇಗ ಮುಗಿಸಲಿ. ಸಂಪುಟ ರಚನೆ ಎಂಬುದು ಬಿಜೆಪಿ ಹೈಕಮಾಂಡ್ ಪಾಲಿಗೆ ಚೆಲ್ಲಾಟವಾಗಿರಬಹುದು. ಆದರೆ, ರಾಜ್ಯದ ಜನರ ಪಾಲಿಗೆ ಇದು ಪ್ರಾಣ ಸಂಕಟವಾಗಿದೆ. ರಾಜ್ಯದ ಜನರಿಗೆ ಈ ನೂತನ ಸರಕಾರ ಇದ್ದೂ ಸತ್ತಂತೆ ಭಾಸವಾಗುತ್ತಿದೆ' ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ಹಾಗೂ ಶಾಸಕ ದಿನೇಶ್ ಗುಂಡೂರಾವ್ ಟೀಕಿಸಿದ್ದಾರೆ.
ಸೋಮವಾರ ಸರಣಿ ಟ್ವೀಟ್ ಮಾಡಿರುವ ಅವರು, `ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಮಂತ್ರಿಗಿರಿಗಾಗಿ ಲಾಬಿ ಮಾಡುತ್ತಿರುವ ಬಿಜೆಪಿ ಶಾಸಕರು, ತಮ್ಮ ಕ್ಷೇತ್ರದ ಕಡೆ ತಲೆ ಹಾಕಿ ಮಲಗಿಲ್ಲ. ಮಂತ್ರಿ ಪದವಿ ಪಡೆಯಲು ಶಾಸಕರು ದಿಲ್ಲಿಯಲ್ಲಿ ತಳವೂರಿದ್ದರೆ, ಇನ್ನು ಕೆಲವರು ಬೆಂಗಳೂರಲ್ಲಿ ಗಿರಕಿ ಹೊಡೆಯುತ್ತಿದ್ದಾರೆ. ಈ ಶಾಸಕರಿಗೆ ತಾವು ಪ್ರತಿನಿಧಿಸುವ ಕ್ಷೇತ್ರದ ಸಮಸ್ಯೆಗಿಂತ, ಮಂತ್ರಿ ಪದವಿಯೇ ಮುಖ್ಯವಾಗಿದೆ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
`ಬಿಜೆಪಿಗೆ ರಾಜ್ಯದಲ್ಲಿ ಏಕವ್ಯಕ್ತಿ ಸರಕಾರ ನಡೆಸುವ ಇರಾದೆಯಿದ್ದರೆ ಅದನ್ನು ಸ್ಪಷ್ಟಪಡಿಸಲಿ. ಬಿಜೆಪಿ ಹೈಕಮಾಂಡ್ನ ಹುಚ್ಚಾಟ ಅತಿರೇಕಕ್ಕೆ ಹೋಗಿದೆ. ರಾಜ್ಯದಲ್ಲಿ ಕೊರೋನ ಮೂರನೆ ಅಲೆಯ ಆತಂಕ ಮತ್ತು ನೆರೆ ಪರಿಸ್ಥಿತಿಯಿದೆ. ಈ ಬಿಕ್ಕಟ್ಟಿನ ಸಂದರ್ಭದಲ್ಲಿ ರಾಜ್ಯದ ಅಒ, ಕೆಲಸ ಕಾರ್ಯ ಬಿಟ್ಟು ಪದೇ ಪದೇ ಹೊಸದಿಲ್ಲಿಗೆ ಹೋಗುವುದು ಎಷ್ಟು ಸರಿ?' ಎಂದು ಅವರು ಪ್ರಶ್ನೆ ಮಾಡಿದ್ದಾರೆ.
`ಬಿಜೆಪಿ ಸರಕಾರದಲ್ಲಿ ಮಂತ್ರಿ ಮಂಡಲ ರಚನೆ ಗಜಪ್ರಸವದಂತಾಗಿದೆ. 2019ರಲ್ಲಿ ಬಿಎಸ್ವೈ ಸರಕಾರ ರಚನೆಯಾದಾಗಲೂ 2 ತಿಂಗಳ ಬಳಿಕ ಸಂಪುಟ ರಚನೆಯಾಗಿತ್ತು. ಈಗ ಬಸವರಾಜ ಬೊಮ್ಮಾಯಿ ನೇತೃತ್ವದ ಸರಕಾರದಲ್ಲೂ ಸಂಪುಟ ರಚನೆಯ ಗೊಂದಲ ಇನ್ನೂ ಮುಂದುವರೆದಿದೆ. ಬಿಜೆಪಿ ಹೈಕಮಾಂಡ್ಗೆ ಸಿಎಂ ಬದಲಾಯಿಸುವಾಗ ಇದ್ದ ತರಾತುರಿ ಸಂಪುಟ ರಚನೆಯಲ್ಲೂ ಇರಬೇಕಲ್ಲವೆ?' ಎಂದು ದಿನೇಶ್ ಗುಂಡೂರಾವ್ ಕಿಡಿಕಾರಿದ್ದಾರೆ.
4
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) August 2, 2021
BJP ಹೈಕಮಾಂಡ್ಗೆ ರಾಜ್ಯದ ಜನರ ಬಗ್ಗೆ ಕೊಂಚವಾದರೂ ಕನಿಕರವಿದ್ದರೆ,ಈ ಸಂಪುಟ ರಚನೆ ಎಂಬ ಸರ್ಕಸ್ನ್ನು ಬೇಗ ಮುಗಿಸಲಿ.
ಸಂಪುಟ ರಚನೆ ಎಂಬುದು BJP ಹೈಕಮಾಂಡ್ ಪಾಲಿಗೆ ಚೆಲ್ಲಾಟವಾಗಿರಬಹುದು.
ಆದರೆ ರಾಜ್ಯದ ಜನರ ಪಾಲಿಗೆ ಇದು ಪ್ರಾಣ ಸಂಕಟವಾಗಿದೆ.
ರಾಜ್ಯದ ಜನರಿಗೆ ಈ ನೂತನ ಸರ್ಕಾರ ಇದ್ದೂ ಸತ್ತಂತೆ ಭಾಸವಾಗುತ್ತಿದೆ.