ಜೆಡಿಎಸ್ ಬಗ್ಗೆ ಟ್ವೀಟ್: ಕೊನೆಗೂ ಸ್ಪಷ್ಟನೆ ನೀಡಿದ ಅನಂತಕುಮಾರ್ ಪುತ್ರಿ ವಿಜೇತಾ ಹೇಳಿದ್ದೇನು?

Update: 2021-08-03 06:23 GMT

ಬೆಂಗಳೂರು: ಇತ್ತೇಚೆಗೆ ಟ್ವಿಟರ್ ನಲ್ಲಿ ಕರ್ನಾಟಕ ರಾಜಕೀಯದ ಬಗ್ಗೆ ಟ್ವೀಟ್ ಮಾಡಿದ್ದ ಮಾಜಿ ಕೇಂದ್ರ ಸಚಿವ ಹಾಗೂ ಬಿಜೆಪಿಯ ಹಿರಿಯ ನಾಯಕ ಅನಂತಕುಮಾರ್ ಪುತ್ರಿ ವಿಜೇತಾ, ರಾಜ್ಯದಲ್ಲಿ  ಜೆಡಿಎಸ್ ಇನ್ನೂ ಕೂಡ ಬಲಿಷ್ಠವಾಗಿದೆ ಎಂದು ಹೇಳಿದ್ದು, ತೀವ್ರ ಚರ್ಚೆಗೆ ಕಾರಣವಾಗಿತ್ತು. ಇದೀಗ ಅದಕ್ಕೆ  ಸ್ಪಷ್ಟನೆ ನೀಡಿದ್ದಾರೆ. 

ಮಂಗಳವಾರ ಟ್ವಿಟರ್ ಮೂಲಕ ತಮ್ಮ ಹೇಳಿಕೆ ಕುರಿತು ಸ್ಪಷ್ಟನೆ ನೀಡಿರುವ ಅವರು, "ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರೂ ಶತ್ರುಗಳಲ್ಲ. ಪರಸ್ಪರ ಗೌರವ ನೀಡುವುದೇ ಈ ವ್ಯವಸ್ಥೆಯ ಮೂಲತತ್ವ ಎಂಬುದನ್ನು ಅಪ್ಪ ಕಲಿಸಿದರು. ಆ ನೆಲೆಯಲ್ಲಿ ನಾನು ಬೇರೆಯವರ ಬಗ್ಗೆ ತೋರಿಸಿದ ಗೌರವವನ್ನು ರಾಜಕೀಯ ಪಕ್ಷ ಸೇರುತ್ತೇನೆಂದು ತಪ್ಪಾಗಿ ಭಾವಿಸಬಾರದು" ಎಂದು ವಿಜೇತಾ ಅನಂತ ಕುಮಾರ್ ಸ್ಪಷ್ಟನೆ ನೀಡಿದ್ದಾರೆ.

"ನಾನು ಈಗಲೇ ಯಾವುದೆ ರಾಜಕೀಯ ಪಕ್ಷ ಸೇರಲಾರೆ. ನನ್ನ ತಂದೆ ಮೂವತ್ತೈದು ಕಾರ್ಯಕರ್ತರ ಜತೆ ಸೇರಿ ಪಕ್ಷವನ್ನು ಒಂದೊಂದೆ ಇಟ್ಟಿಗೆ ಜೋಡಿಸಿದಂತೆ ಕಟ್ಟಿ ಬೆಳೆಸಿದರು" ಎಂದು ನೆನಪು ಮಾಡಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News