ಕಲಬುರಗಿ: ಮಹಿಳೆ ಮೇಲೆ ಗುಂಡಿನ ದಾಳಿ ಪ್ರಕರಣ; ಅರೋಪಿಯ ಬಂಧನ
Update: 2021-08-04 13:51 GMT
ಕಲಬುರಗಿ: ಜಮೀನಿನ ವಿಚಾರದಲ್ಲಿ ಮಹಿಳೆಯೋರ್ವಳ ಮೇಲೆ ಗುಂಡಿನ ದಾಳಿ ನಡೆದಿರುವ ಘಟನೆ ಆಳಂದ ತಾಲೂಕಿನ ಕಡಗಂಚಿ ಗ್ರಾಮದಲ್ಲಿ ಬುಧುವಾರ ನಡೆದಿದೆ.
ಕ್ಷುಲ್ಲಕ ಕಾರಣಕ್ಕೆ ಜಮೀನಿನ ವಿಚಾರವಾಗಿ ನಡೆದ ವಾಗ್ವಾಕ್ಕೆ ಕಡಗಂಚಿ ಗ್ರಾಮದ ನಿರ್ಮಲ ಸಾತಲಿಂಗಪ್ಪ (38) ಎಂಬ ಮಹಿಳೆ ಮೇಲೆಯೆ ಗುಂಡಿನ ದಾಳಿ ನಡೆದಿದೆ. ಅದೇ ಗ್ರಾಮದ ನಾಗರಾಜ ವಾಣಿ ಎಂಬಾತನೆ ಗುಂಡು ಹಾರಿಸಿದ ಆರೋಪಿಯಾಗಿದ್ದು, ಮೊದಲು ಒಂದು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ನಂತರ ಎರಡನೇ ಗುಂಡು ನೇರವಾಗಿ ನಿರ್ಮಲಾ ಭುಜಕ್ಕೆ ತಾಗಿ, ಗಾಯಗೊಂಡಿದ್ದಾಳೆ.
ಆರೋಪಿ ನಾಗರಾಜನನ್ನು ಬಂಧಿಸಲಾಗಿದ್ದು, ಈ ಸಂಬಂಧ ನರೋಣಾ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.