ಚಾಮರಾಜನಗರ: ಜಿಂಕೆಗೆ ತಿಂಡಿ ನೀಡಿದ ಪತ್ರಕರ್ತನಿಗೆ ದಂಡ

Update: 2021-08-04 17:29 GMT

ಚಾಮರಾಜನಗರ: ಬಂಡೀಪುರ ಅರಣ್ಯ ಪ್ರದೇಶದಲ್ಲಿ ಜಿಂಕೆಗೆ ತಿಂಡಿ-ತಿನಿಸು ನೀಡಿದ ರಾಷ್ಟ್ರೀಯ ಸುದ್ದಿ ವಾಹಿನಿಯ ವರದಿಗಾರನಿಗೆ ಅರಣ್ಯಾಧಿಕಾರಿಗಳು ದಂಡ ವಿಧಿಸಿದ್ದಾರೆ.

ನವದೆಹಲಿಯ ಎನ್ ಡಿ ಟಿವಿಯ ವರದಿಗಾರ ವಾಖ್ಹರ್ ಅಹಮದ್ ಅವರಿಗೆ ಅರಣ್ಯಾಧಿಕಾರಿಗಳು ಎಚ್ಚರಿಕೆ ನೀಡಿ ದಂಡ ವಿಧಿಸಿದ್ದಾರೆ.
ಇದೇ ಆ. 3ರಂದು ಬೆಳಗ್ಗೆ ಬಂಡೀಪುರದಿಂದ ಊಟಿಗೆ ಹೋಗುವ ರಾಷ್ಟ್ರೀಯ ಹೆದ್ದಾರಿಯ ಬಂಡೀಪುರ ವಲಯ ವ್ಯಾಪ್ತಿಗೆ ಬರುವ ರಸ್ತೆಯಲ್ಲಿ ಪ್ರವಾಸಿಗರೊಬ್ಬರು ಟ್ಯಾಕ್ಸಿಯಲ್ಲಿ ಪ್ರಯಾಣಿಸುತ್ತಿದ್ದಾಗ ಕಾರಿನಿಂದ  ಜಿಂಕೆಯೊಂದಕ್ಕೆ ತಿಂಡಿ- ತಿನಿಸುಗಳನ್ನು ಕೊಡುತ್ತಿರುವ ಛಾಯಾಚಿತ್ರವು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು.

ಈ ಸಂಬಂಧ ಬಂಡೀಪುರ ವಲಯದ ಸಿಬ್ಬಂದಿಗಳು ಸದರಿ ಪ್ರವಾಸಿಗರನ್ನು ಪತ್ತೆಹಚ್ಚಿ ವಿಚಾರಿಸಿದಾಗ ಅವರು ನವದೆಹಲಿಯ  ರಾಷ್ಟ್ರೀಯ ಸುದ್ದಿ ವಾಹಿನಿಯ ವರದಿಗಾರ ವಾಖ್ಹರ್ ಅಹಮದ್ ಎಂಬುದು ತಿಳಿದುಬಂದಿದೆ. ನಂತರ ಅವರಿಗೆ ಅರಣ್ಯಾಧಿಕಾರಿಗಳು ಸೂಕ್ತ ಎಚ್ಚರಿಕೆ ನೀಡಿ ದಂಡ ವಿಧಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News