ಶಾಸಕ ಝಮೀರ್ ಮನೆಯ ಮೇಲೆ ಇ.ಡಿ ದಾಳಿ: 'ನಾನಂತೂ ಯಾವ ದೂರನ್ನೂ ನೀಡಿಲ್ಲ' ಎಂದ ಕುಮಾರಸ್ವಾಮಿ

Update: 2021-08-06 12:16 GMT

ಬೆಂಗಳೂರು, ಆ. 6: `ರಾಜಕೀಯದಲ್ಲಿ ಇದೆಲ್ಲವೂ ಸರ್ವೇ ಸಾಮಾನ್ಯ. ಆದರೆ, ನಾನಂತೂ ಯಾವ ದೂರನ್ನೂ ನೀಡಿಲ್ಲ' ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದಾರೆ.

ಶುಕ್ರವಾರ ರಾಮನಗರದ ಕೇತಗಾನಹಳ್ಳಿ ತೋಟದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಕುಮಾರಸ್ವಾಮಿ, `ಕೇಂದ್ರ ಸರಕಾರದ ಆದಾಯ ತೆರಿಗೆ(ಐಟಿ) ಮತ್ತು ಜಾರಿ ನಿರ್ದೇಶನಾಲಯ(ಈಡಿ)ಕ್ಕೆ ಕೆಲ ಸಂಸ್ಥೆಗಳು ಮೂಗರ್ಜಿಗಳನ್ನು ಬರೆಯುತ್ತಿರುತ್ತಾರೆ. ಅವುಗಳನ್ನು ಆಧರಿಸಿ ಈ ರೀತಿಯ ದಾಳಿಗಳು ನಡೆಯುತ್ತಿರುತ್ತವೆ. ನನ್ನ ತೋಟದ ಜಮೀನಿನ ವಿಚಾರದಲ್ಲಿಯೂ ದಾಳಿಯಾಗಿತ್ತು' ಎಂದು ಸ್ಮರಿಸಿದರು.

`ಇಪ್ಪತ್ತೈದು ವರ್ಷಗಳ ಕಾಲ ನನಗಾದ ಕಷ್ಟ, ಕಾಟ ನನಗೆ ಮಾತ್ರ ಗೊತ್ತಿದೆ. ರಾಜಕೀಯದಲ್ಲಿದ್ದಾಗ ಇದೆಲ್ಲವೂ ಸಾಮಾನ್ಯ. ಆದರೆ, ನಮ್ಮ ಬಳಿ ದಾಖಲೆಗಳು ಸರಿಯಿದ್ದರೆ ಯಾರು ಏನು ಮಾಡಲು ಸಾಧ್ಯವಿಲ್ಲ' ಎಂದು ಕುಮಾರಸ್ವಾಮಿ ಇದೇ ವೇಳೆ ಪ್ರತಿಕ್ರಿಯೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News