ಹಾವೇರಿ: ಠಾಣೆಯಲ್ಲಿ ಹುಟ್ಟುಹಬ್ಬ ಆಚರಿಸಿದ ಪಿಎಸ್ಸೈ ಅಮಾನತು

Update: 2021-08-12 15:05 GMT

ಹಾವೇರಿ, ಆ.12: ಪೊಲೀಸ್ ಮಹಾನಿರ್ದೇಶಕರ ಆದೇಶ ಉಲ್ಲಂಘಿಸಿ ಪೊಲೀಸ್ ಠಾಣೆಯಲ್ಲಿಯೇ ಸಾರ್ವಜನಿಕರೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದ ಆರೋಪ ಸಂಬಂಧ ಬಂಕಾಪುರ ಠಾಣೆಯ ಪಿಎಸ್ಸೈ ಸಂತೋಷ್ ಪಾಟೀಲ್ ಅನ್ನು ಜಿಲ್ಲಾ ಎಸ್ಪಿ ಹನುಮಂತರಾಯ ಅಮಾನತುಗೊಳಿಸಿದ್ದಾರೆ.

ಇತ್ತೀಚಿಗೆ ಪಿಎಸ್ಸೈ ಸಂತೋಷ್ ಪಾಟೀಲ್ ಅವರು ಯುವಕರ ಗುಂಪಿನೊಂದಿಗೆ ಕೇಕ್ ಕತ್ತರಿಸಿ, ಠಾಣೆಯಲ್ಲಿ ಸಂಭ್ರಮಾಚರಣೆ ಮಾಡಿದ್ದರು. ಈ ಕುರಿತು ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಇಲಾಖೆ ವಿಚಾರಣೆ ಕಾಯ್ದಿರಿಸಿ ಪಿಎಸ್ಸೈ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News