ರಾಕ್ಷಸರನ್ನ ಬೆಳೆಸಿದರೆ ಏನಾಗುತ್ತದೆ ಎಂಬುದಕ್ಕೆ ಅಫ್ಘಾನಿಸ್ತಾನ ಉದಾಹರಣೆ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

Update: 2021-08-17 17:20 GMT

ಮೈಸೂರು,ಆ.17: 'ರಾಕ್ಷಸರನ್ನ ಬೆಳೆಸಿದರೆ ಏನಾಗುತ್ತದೆ ಎಂಬುದಕ್ಕೆ ಅಫ್ಘಾನಿಸ್ತಾನ ಉದಾಹರಣೆ. ರಾಕ್ಷಸರಿಂದ, ಭಯೋತ್ಪಾದಕರಿಂದ ಉಳಿಗಾಲವಿಲ್ಲ'. ಎಂದು ಕೇಂದ್ರ ಕೃಷಿ ಸಚಿವೆ ಶೋಭ ಕರಂದ್ಲಾಜೆ ಹೇಳಿದ್ದಾರೆ. 

ನಗರದ ಖಾಸಗಿ ಹೋಟೆಲ್‍ನಲ್ಲಿ ಮಂಗಳವಾರ ನಡೆದ “ಜನಾಶೀರ್ವಾದ” ಯಾತ್ರೆಯ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು,  'ಅಫಘಾನಿಸ್ತಾನಕ್ಕೆ ಬಂದ ಸ್ಥಿತಿ ಯಾವ ದೇಶಕ್ಕೂ ಬರಬಾರದು ಎಂಬುದು ಎಲ್ಲಾ ದೇಶಗಳು ಅರಿತುಕೊಂಡಿವೆ. ಇವತ್ತು ಭಾರತ ಏನು ಹೇಳುತ್ತೆ ಎಂಬುದನ್ನು ಕೇಳುವ ನಿರೀಕ್ಷೆಯಲ್ಲಿ ಇತರ ದೇಶಗಳು  ಇದೆ' ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು.

'ಕಾಂಗ್ರೆಸ್‍ನವರು ಕಳೆದ 70 ವರ್ಷಗಳಿಂದ ದೇಶವನ್ನು ಲೂಟಿ ಹೊಡೆದಿದ್ದಾರೆ. ಅವರ ಅಧಿಕಾರವಧಿಯಲ್ಲಿ ದೇಶಕ್ಕಾಗಿ ಸೇವೆ ಸಲ್ಲಿಸುವ ಬದಲು ಅವರು ಮತ್ತು ಅವರ ಕುಟುಂಬದವರ ಅಭಿವೃದ್ಧಿ ಮಾಡಿದ್ದಾರೆ. ಅಧಿಕಾರವನ್ನು ಅವರ ಕುಟುಂಬದವರೇ ಅನುಭವಿಸುವಂತೆ ನೋಡಿಕೊಂಡಿದ್ದಾರೆ' ಎಂದು ಕಿಡಿಕಾರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News