ನನಗೆ ಗುಂಡು ಹಾಕುವುದಾದ್ರೆ ಹಾಕಿ, ಗಣಪತಿ ಹಬ್ಬಕ್ಕೆ ಕೋವಿಡ್ ನಿರ್ಬಂಧ ಹೇರಬೇಡಿ: ಶಾಸಕ ಯತ್ನಾಳ

Update: 2021-08-22 10:51 GMT

ವಿಜಯಪುರ : ನನಗೆ ಗುಂಡು ಹಾಕುವುದಾದ್ರೆ ಹಾಕಿ ಆದರೆ ಗಣಪತಿ ಹಬ್ಬ ಸೇರಿದಂತೆ ಹಿಂದೂ ಹಬ್ಬಗಳ ಮೇಲೆ ಕೋವಿಡ್ ನಿರ್ಬಂಧ ಹೇರಬೇಡಿ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ವಿಜಯಪುರದಲ್ಲಿ ಮಾತನಾಡಿದ ಅವರು, ಗಣಪತಿ ಹಬ್ಬಕ್ಕೆ ಕೋವಿಡ್ ನಿರ್ಬಂಧ ಹಾಕದಂತೆ ಸಿಎಂ ಅವರಿಗೆ ಮನವರಿಕೆ ಮಾಡಿದ್ದೇನೆ. ಅಲ್ಲದೇ, ಹಿಂದೂಗಳ ಹಬ್ಬಕ್ಕೆ ಮಾತ್ರ ಕೋವಿಡ್ ಕರಿ ಛಾಯೆ ಮೂಡುವಂತೆ ಮಾಡಬೇಡಿ. ಬದಲಿಗೆ ವಿಜೃಂಭಣೆಯಿಂದ ಹಬ್ಬಕ್ಕೆ ಅನುಮತಿ ಸರ್ಕಾರ ನೀಡಬೇಕು ಎಂದರು.

ಉಳಿದ ಹಬ್ಬ ಹಾಗೂ ಮೆರವಣಿಗೆಗೆ ನೂರಾರು ಜನರು ಸೇರುತ್ತಾರೆ. ಆ ವೇಳೆಯಲ್ಲಿ ಕೊರೋನ ಬರೋದಿಲ್ಲವೇ  ಎಂದು ಅವರು ಪ್ರಶ್ನಿಸಿದರು. ಅದಕ್ಕಾಗಿ ಸರ್ಕಾರ ಏನೇ ನಿರ್ಬಂಧ ಮಾಡಿದರೂ ನಾನು ಮಾತ್ರ ಗುಮ್ಮಟನಗರಿಯಲ್ಲಿ ಗಣಪತಿ ಹಬ್ಬವನ್ನು ವಿಜೃಂಭಣೆಯಿಂದ ಆಚರಣೆ ಮಾಡುತ್ತೇನೆ ಎಂದು ಶಾಸಕ ಯತ್ನಾಳ ಹೇಳಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News