ಆರ್ಯ ಈಡಿಗ ಮತ್ತು ನಾರಾಯಣ ಗುರುಗಳಿಗೆ ಅವಹೇಳನ ಆರೋಪ: ಇತಿಹಾಸ ತಜ್ಞ ರಾಮಚಂದ್ರ ಗುಹಾ ವಿರುದ್ಧ ದೂರು

Update: 2021-08-22 12:26 GMT
 ಇತಿಹಾಸ ತಜ್ಞ ರಾಮಚಂದ್ರ ಗುಹಾ 

ಬೆಂಗಳೂರು, ಆ.22: ಆರ್ಯ ಈಡಿಗ ಮತ್ತು ಬ್ರಹ್ಮರ್ಷಿ ನಾರಾಯಣ ಗುರುಗಳಿಗೆ ಇತಿಹಾಸ ತಜ್ಞ ರಾಮಚಂದ್ರ ಗುಹಾ ಅವಹೇಳನ ಮಾಡಿದ್ದಾರೆಂದು ಆರೋಪಿಸಿ ಇಲ್ಲಿನ ಉಪ್ಪಾರಪೇಟೆ ಠಾಣಾ ಪೊಲೀಸರಿಗೆ ದೂರು ನೀಡಲಾಗಿದೆ.

ರಾಮಚಂದ್ರಗುಹಾ ಅವರ ಇತ್ತೀಚಿನ `ಇಂಡಿಯಾ ಆಫ್ಟರ್ ಗಾಂಧಿ' ಕೃತಿಯಲ್ಲಿ ಬ್ರಹ್ಮರ್ಷಿ ನಾರಾಯಣ ಗುರುಗಳಿಗೆ ಅವಹೇಳನ ಮಾಡಿದ್ದಾರೆಂದು ಪ್ರಣವಾನಂದ ಸ್ವಾಮೀಜಿ ಉಪ್ಪಾರಪೇಟೆ ಪೊಲೀಸರಿಗೆ ದೂರು ನೀಡಿದ್ದಾರೆ.

ಗುಹಾ ಅವರು ಕೃತಿಯಲ್ಲಿ ಅವಹೇಳನಕಾರಿ ಅಂಶ ಪ್ರಸ್ತಾಪಿಸಿದ್ದಾರೆ. ಈ ಕೃತಿಯ ಲೇಖಕ ರಾಮಚಂದ್ರ ಗುಹಾ ವಿರುದ್ಧ ದೂರು ನೀಡಿದ್ದೇವೆ. ರಾಮಚಂದ್ರ ಗುಹಾ ಅವರನ್ನು ಬಂಧಿಸಬೇಕು. ಜೊತೆಗೆ ಆ ಪುಸ್ತಕ ಮುಟ್ಟುಗೋಲು ಹಾಕುವಂತೆ ಒತ್ತಾಯಿಸುತ್ತಿದ್ದೇವೆ ಎಂದು ದೂರುದಾರ ಪ್ರಣವಾನಂದ ಸ್ವಾಮೀಜಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News