ಮೈಸೂರು: ಚಿನ್ನ, ಬೆಳ್ಳಿ ಕದಿಯಲು ಬಂದ ದರೋಡೆಕೋರರಿಂದ ಗುಂಡಿನ ದಾಳಿ; ಯುವಕ ಬಲಿ

Update: 2021-08-23 16:25 GMT

ಮೈಸೂರು,ಆ.23: ನಗರದ ಚಿನ್ನದ ಅಂಗಡಿಯಲ್ಲಿ ಚಿನ್ನ, ಬೆಳ್ಳಿ ಕದಿಯಲು ಬಂದ ದರೋಡೆಕೋರರು ಹಾರಿಸಿದ ಗುಂಡಿಗೆ ಅಮಾಯಕನೊಬ್ಬ ಬಲಿಯಾದ ಘಟನೆ ಮೈಸೂರಿನಲ್ಲಿ ನಡೆದಿದೆ.

ನಗರದ ವಿದ್ಯಾರಣ್ಯಪುರಂ ನಲ್ಲಿರುವ ಚಿನ್ನದ ಅಂಗಡಿಯೊಂದರಲ್ಲಿ ಚಿನ್ನ,ಬೆಳ್ಳಿ ಕದಿಯಲು ದರೋಡೆಕೋರರು ಮುಂದಾಗಿದ್ದಾರೆ. ಈ ವೇಳೆ ಅವರು ಹಾರಿಸಿದ ಗುಂಡಿಗೆ ಚಂದ್ರು (23) ಎಂಬ ಯುವಕನಿಗೆ ತಗುಲಿ ಅವರು ಮೃತಪಟ್ಟಿದ್ದಾರೆ.

ಚಿನ್ನ ಬೆಳ್ಳಿ ಕದಿಯುವ ವೇಳೆ ಅಂಗಡಿ ಮಾಲಕ ಆಗಮಿಸಿದ್ದಾನೆ. ದರೋಡೆಕೋರರನ್ನು ತಡೆಯಲು ಪ್ರಯತ್ನಿಸಿದ ಅಂಗಡಿ ಮಾಲಕನಿಗೆ ಗುಂಉಡ ಹಾರಿಸಿದ್ದಾರೆ. ಈ ವೇಳೆ ಗುಂಡು ಚಂದ್ರುವಿಗೆ ತಗುಲಿ ಆತ ಸಾವೀಗೀಡಾಗಿದ್ದಾನೆ.

ಈ ಸಂಬಂಧ ಸ್ಥಳಕ್ಕೆ ಆಗಮಿಸಿದ ವಿದ್ಯಾರಣ್ಯಪುರಂ ಪೊಲೀಸರು ಘಟನೆ ಸಂಬಂಧ ಹೆಚ್ಚಿನ ಮಾಹಿತಿಯನ್ನು ಕಲೆಹಾಕುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News