ವಿಧಾನಸೌಧದ ಬ್ಯಾಂಕ್ವೆಟ್‍ಹಾಲ್‍ನಲ್ಲಿ ಮಾಜಿ ಮುಖ್ಯಮಂತ್ರಿಗಳ ಭಾವಚಿತ್ರವಿರಲಿ: ಬಸವರಾಜ ಹೊರಟ್ಟಿ

Update: 2021-08-25 17:44 GMT

ಬೆಂಗಳೂರು, ಆ.25: ರಾಜ್ಯದ ಅಭಿವೃದ್ಧಿಗೆ ಬಹುವಾಗಿ ಶ್ರಮಿಸಿರುವ ಮಾಜಿ ಮುಖ್ಯಮಂತ್ರಿಗಳ ಭಾವಚಿತ್ರಗಳನ್ನು ಬ್ಯಾಂಕ್ವೆಟ್ ಹಾಲ್‍ನಲ್ಲಿ ಹಾಕಿ ಅವರಿಗೆ ಗೌರವ ಸಲ್ಲಿಸಬೇಕೆಂದು ಸಭಾಪತಿ ಬಸವರಾಜ ಹೊರಟ್ಟಿ ಮನವಿ ಮಾಡಿದ್ದಾರೆ.

ಈ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಪತ್ರ ಬರೆದಿರುವ ಅವರು, ರಾಜ್ಯದ ಹಲವು ಮಾಜಿಮುಖ್ಯಮಂತ್ರಿಗಳ ಜನ್ಮ ದಿನ ಹಾಗೂ ನಿಧನರಾದ ದಿನಗಳಲ್ಲಿ ಅವರ ಪ್ರತಿಮೆಗಳು ಇಲ್ಲದ ಕಾರಣ, ಯಾವುದೇ ರೀತಿಯ ಗೌರವ ಸಲ್ಲಿಸುವಂತಹ ವ್ಯವಸ್ಥೆಗಳಿರುವುದಿಲ್ಲವೆಂದು ಬೇಸರ ವ್ಯಕ್ತಪಡಿಸಿದ್ದಾರೆ.

ಕ್ರಮವಾಗಿ ಕಡಿದಾಳು ಮಂಜಪ್ಪ, ಎಸ್.ಆರ್.ಕಂಠಿ, ಬಿ.ಡಿ.ಜತ್ತಿ, ಗುಂಡೂರಾವ್, ವೀರೇಂದ್ರಪಾಟೀಲ, ಬಂಗಾರಪ್ಪ, ರಾಮಕೃಷ್ಣಹೆಗಡೆ, ಎಸ್.ಆರ್.ಬೊಮ್ಮಾಯಿ, ಜೆ.ಎಚ್.ಪಟೇಲ ಮುಂತಾದ ಗಣ್ಯರಿಗೆ ಗೌರವಗಳನ್ನು ಸಲ್ಲಿಸಲು ಭಾವಚಿತ್ರ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ.

ರಾಜ್ಯದ ಎಲ್ಲಾ ಮುಖ್ಯಮಂತ್ರಿಗಳ ಪೂರ್ಣ ಪ್ರಮಾಣದ ಭಾವ ಚಿತ್ರಗಳನ್ನು ಅವರುಗಳ ಅವಧಿಗಳನ್ನು ನಮೂದಿಸಿ, ಅವರುಗಳಿಗೆ ಸಮಾನಗೌರವ ಸಲ್ಲಿಸುವಂತಹ ಕಾರ್ಯವನ್ನು ಆ.29ರಂದು ರಾಮಕೃಷ್ಣಹೆಗಡೆಯವರ ಹುಟ್ಟುಹಬ್ಬದ ದಿನದಂದು ಈ ಕಾರ್ಯಕ್ರಮಕ್ಕೆ ನಾಂದಿ ಹಾಡುವಂತಾಗಲಿ ಎಂದು ಅವರು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News