×
Ad

ರಾಜ್ಯದಲ್ಲಿ ಶುಕ್ರವಾರ 1220 ಮಂದಿಗೆ ಕೊರೋನ ದೃಢ, 19 ಸಾವು

Update: 2021-09-03 19:40 IST

ಬೆಂಗಳೂರು, ಸೆ.3: ರಾಜ್ಯದಲ್ಲಿ ಶುಕ್ರವಾರ 1220 ಕೋವಿಡ್ ಪ್ರಕರಣ ವರದಿಯಾಗಿದ್ದು, 19ಮಂದಿ ಸಾವನ್ನಪ್ಪಿದ್ದಾರೆ. 1175 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಒಟ್ಟು 18,404 ಸಕ್ರಿಯ ಪ್ರಕರಣಗಳಿದ್ದು, ಅವರೆಲ್ಲರೂ ಆಸ್ಪತ್ರೆ, ಕೋವಿಡ್ ಸೆಂಟರ್ ಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಶುಕ್ರವಾರ ರಾಜ್ಯದಲ್ಲಿ 19ಮಂದಿ ಕೋವಿಡ್ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಬೆಂಗಳೂರು ಗ್ರಾಮಾಂತರ 1, ಬೆಂಗಳೂರು ನಗರ 8, ದಕ್ಷಿಣ ಕನ್ನಡ 4, ಧಾರವಾಡ, ಕೋಲಾರ 1, ಮಂಡ್ಯ 1, ಉತ್ತರಕನ್ನಡ 2, ವಿಜಯಪುರದಲ್ಲಿ ಒಂದು ಸಾವಿನ ಪ್ರಕರಣ ವರದಿಯಾಗಿದೆ.

1220 ಸೋಂಕಿತರು: ರಾಜ್ಯದಲ್ಲಿ 1220 ಸೋಂಕಿತ ಪ್ರಕರಣ ವರದಿಯಾಗಿದ್ದು,  ಬಾಗಲಕೋಟೆ 1, ಬಳ್ಳಾರಿ 8, ಬೆಳಗಾವಿ 24, ಬೆಂ.ಗ್ರಾಮಾಂತರ 19, ಬೆಂಗಳೂರು ನಗರ 319, ಚಾಮರಾಜನಗರ 5, ಚಿಕ್ಕಬಳ್ಳಾಪುರ 3, ಚಿಕ್ಕಮಗಳೂರು 34, ಚಿತ್ರದುರ್ಗ 12, ದಕ್ಷಿಣಕನ್ನಡ 232, ದಾವಣಗೆರೆ 8, ಧಾರವಾಡ 9, ಗದಗ 4, ಹಾಸನ 81, ಹಾವೇರಿ 3, ಕಲಬುರಗಿ 3, ಕೊಡಗು 64, ಕೋಲಾರ 9, ಕೊಪ್ಪಳ 2, ಮಂಡ್ಯ 20, ಮೈಸೂರು 86, ರಾಮನಗರ 3, ಶಿವಮೊಗ್ಗ 35, ತುಮಕೂರು 51, ಉಡುಪಿ 150, ಉತ್ತರಕನ್ನಡ 32, ಯಾದಗಿರಿ 3 ಮಂದಿ ಸೋಂಕಿತರಾಗಿದ್ದಾರೆ. 

ಕಳೆದ ಹಲವು ದಿನಗಳಿಂದ ಸಾವಿನ ಪ್ರಕರಣ ಹಾಗೂ ಕೋವಿಡ್ ಸೋಂಕಿತ ಪ್ರಕರಣ ಕಡಿಮೆಯಾಗಿತ್ತು. ಆದರೆ, ದಿಢೀರನೆ ಏರಿಕೆ ಖಂಡಿದ್ದು, ಆತಂಕ ಮೂಡಿಸಿದೆ ಶುಕ್ರವಾರ ಸೋಂಕಿಗೆ 8ಮಂದಿ ಸಾವನ್ನಪ್ಪಿದ್ದಾರೆ. 319 ಮಂದಿ ಸೋಂಕಿತರಾಗಿದ್ದಾರೆ. ಇಂದು 202 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದು, 7718 ಸಕ್ರಿಯ ಪ್ರಕರಣಗಳಿವೆ. ಅವರೆಲ್ಲರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News