ಮೈಸೂರು ಅತ್ಯಾಚಾರ ಪ್ರಕರಣ: ನಮ್ಮ ಮಕ್ಕಳನ್ನು ಎನ್‍ಕೌಂಟರ್ ಮಾಡಬೇಡಿ; ಪೊಲೀಸರಿಗೆ ಆರೋಪಿಗಳ ಕುಟುಂಬ ಸದಸ್ಯರ ಮನವಿ

Update: 2021-09-03 15:14 GMT

ಮೈಸೂರು,ಸೆ.3: ಮೈಸೂರಿನಲ್ಲಿ ವಿದ್ಯಾರ್ಥಿನಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರದ ಆರೋಪಿಗಳನ್ನು ಪೊಲೀಸರು ಎನ್‍ಕೌಂಟರ್ ಮಾಡಿ ಕೊಲ್ಲುತ್ತಾರೆ ಎಂಬ ಭೀತಿ ಆರೋಪಿಗಳ ಮನೆಯಲ್ಲಿ ಆವರಿಸಿದ್ದು, ದಯಮಾಡಿ ನಮ್ಮ ಮಕ್ಕಳನ್ನು ಎನ್‍ಕೌಂಟರ್ ಮಾಡಬೇಡಿ ಎಂದು ತಂದೆ-ತಾಯಿಗಳು ಪೊಲೀಸರನ್ನು ಬೇಡಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.

ಕೃತ್ಯ ನಡೆಸಿದ ದಿನ ಆರೋಪಿಗಳು ಧರಿಸಿದ್ದ ಬಟ್ಟೆ ಮತ್ತು ಮಾರಾಕಾಸ್ತ್ರಗಳನ್ನು ವಶಕ್ಕೆ ಪಡೆಯಲು ತಮಿಳುನಾಡಿಗೆ ತೆರಳಿರುವ ಪೊಲೀಸರು ಆರೋಪಿಗಳ ಮನೆಗಳಿಗೆ ತೆರಳಿದಾಗ ಪೋಷಕರು ಮತ್ತು ಕುಟುಂಬದ ಸದಸ್ಯರುಗಳು ಕಣ್ಣೀರಿಡುತ್ತ ಕೈಮುಗಿದು ಮನವಿ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಸತ್ಯಮಂಗಲ, ಈರೋಡ್, ತಾಳವಾಡಿ, ತಿರುಪೂರ್ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ಕರ್ನಾಟಕದ ಪೊಲೀಸರು ಆರೋಪಿಗಳನ್ನು ಎನ್‍ಕೌಂಟರ್ ಮಾಡಿ ಕೊಲ್ಲುತ್ತಾರೆ ಎಂಬ ಸುದ್ದಿ ಅಲ್ಲಿನ ಸ್ಥಳೀಯ ಮಾಧ್ಯಮಗಳಲ್ಲಿ ಪ್ರಕಟಗೊಂಡ ಹಿನ್ನಲೆಯಲ್ಲಿ ಆತಂಕಕ್ಕೆ ಒಳಗಾದ ಕುಟುಂಬದವರು ಕರ್ನಾಟಕ ಪೊಲೀಸರನ್ನು ಬೇಡಿಕೊಂಡಿದ್ದಾರೆ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News