ಮಡಿಕೇರಿ : ಹೊಳೆಯಲ್ಲಿ ಕೊಚ್ಚಿ ಹೋಗಿದ್ದ ಮಹಿಳೆಯ ಮೃತದೇಹ ಪತ್ತೆ
Update: 2021-09-15 12:40 GMT
ಮಡಿಕೇರಿ ಸೆ.15 : ಪೆರಾಜೆಯ ಅರಂತೋಡು ಹೊಳೆಯಲ್ಲಿ ಬಟ್ಟೆ ಒಗೆಯಲೆಂದು ಹೋಗಿದ್ದ ಮಹಿಳೆ ನೀರು ಪಾಲಾದ ಘಟನೆ ನಡೆದು ನಾಲ್ಕು ದಿನ ಕಳೆದ ನಂತರ ಮೃತದೇಹ ಪತ್ತೆಯಾಗಿದೆ.
ಸೆ.11 ರಂದು ಸಂಜೆ ಅರಂತೋಡಿನ ಮಾಡದಕಾನ ಹೊಳೆಗೆ ಬಟ್ಟೆ ಒಗೆಯಲೆಂದು ಹೋಗಿದ್ದ ಸಣ್ಣಮನೆಯ ಮಾಧವ ಅವರ ಪತ್ನಿ ಮೀನಾಕ್ಷಿ ಎಂಬುವವರು ನಾಪತ್ತೆಯಾಗಿದ್ದರು.
ಅಗ್ನಿ ಶಾಮಕದಳ, ಮುಳುಗು ತಜ್ಞರು ಹಾಗೂ ಗ್ರಾಮಸ್ಥರು ಸತತ ನಾಲ್ಕು ದಿನಗಳಿಂದ ಶವ ಪತ್ತೆ ಕಾರ್ಯದಲ್ಲಿ ತೊಡಗಿದ್ದರು. ಇಂದು ಪೈಚಾರ್ ಮುಳುಗು ತಜ್ಞರ ತಂಡ ಪಯಸ್ವಿನಿ ನದಿಯಲ್ಲಿ ಹುಡುಕಾಟ ನಡೆಸಿದಾಗ ಮಧ್ಯಾಹ್ನ ಪೆರಾಜೆ ಬಳಿ ಶವ ಪತ್ತೆಯಾಗಿದೆ. ಮರಣೋತ್ತರ ಪರೀಕ್ಷೆಯ ನಂತರ ಮೃತದೇಹವನ್ನು ಕುಟುಂಬದ ಸದಸ್ಯರಿಗೆ ನೀಡಲಾಯಿತು.
ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.