'ಪ್ರಶ್ನೋತ್ತರ ವೇಳೆ ಮಂತ್ರಿಗಳನ್ನು ಭೇಟಿಯಾಗಬೇಡಿ': ಸದನದಲ್ಲಿ ಶಾಸಕರಿಗೆ ಸ್ಪೀಕರ್ ಸೂಚನೆ

Update: 2021-09-16 06:42 GMT
ಸ್ಪೀಕರ್ ವಿಶ್ವೇಶರ ಹೆಗಡೆ

ಬೆಂಗಳೂರು: 'ಪ್ರಶ್ನೋತ್ತರ ವೇಳೆ ಸಚಿವರನ್ನು ಭೇಟಿಯಾಗುವುದರಿಂದ ಇಲ್ಲಿ ಎಲ್ಲರಿಗೂ ತೊಂದರೆ' ಎಂದು ಅಧಿವೇಶನದಲ್ಲಿ ಸ್ಪೀಕರ್ ವಿಶ್ವೇಶರ ಹೆಗಡೆ ಕಾಗೇರಿ ಶಾಸಕರಿಗೆ ಸೂಚನೆ ನೀಡಿರುವ ಪ್ರಸಂಗ ನಡೆಯಿತು. 

ಮೂಡಿಗೆರೆ ಶಾಸಕ ಎಂ.ಪಿ ಕುಮಾರಸ್ವಾಮಿ ಪ್ರಶ್ನೋತ್ತರ ವೇಳೆ ಮಾತನಾಡುತ್ತಿದ್ದಾಗ ಕೆಲವು ಶಾಸಕರು ಮತ್ತು ಸಚಿವರು ಮಾತುಕತೆ ನಡೆಸುತ್ತಿರೋದನ್ನು ಗಮನಿಸಿದ  ಸ್ಪೀಕರ್ ವಿಶ್ವೇಶರ ಹೆಗಡೆ ಕಾಗೇರಿ 'ಶಾಸಕರು ಮಂತ್ರಿಗಳನ್ನು ಭೇಟಿಯಾಗುವುದಿದ್ದರೆ ಪ್ರಶ್ನೋತ್ತರ ಅವಧಿ ಮುಗಿದ ಬಳಿಕ ಭೇಟಿ ಮಾಡಿ' ಎಂದು ಸೂಚಿಸಿದರು. 

ಇದೇ ವೇಳೆ ಮಧ್ಯ ಪ್ರವೇಶಿಸಿದ ಶಾಸಕ ಬಸನಗೌಡ ಪಾಟೀಲ ಯತ್ನಾಳ 'ಸಚಿವರಿಗೆ ಶಾಸಕರನ್ನು ಭೇಟಿಯಾಗಲು ಒಂದು ಸಮಯ ನಿಗದಿಗೊಳಿಸಿ ಎಂದು ಒತ್ತಾಯಿಸಿದರು. ನಮಗೆ ಸಚಿವರು ಇಲ್ಲೇ ಸಿಗೋದು ಆದ್ದರಿಂದ ಇದಕ್ಕೆ ಸಂಬಂಧಿಸಿ ನೀವು ನಿರ್ದೇಶನ ಕೊಡಿ' ಎಂದು ಸ್ಪೀಕರ್ ಗೆ ಮನವಿ ಮಾಡಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News