ಕೋಲಾರ: ಯುವಕನ ಕತ್ತು ಕೊಯ್ದು ಕೊಲೆ

Update: 2021-09-16 16:05 GMT

ಕೋಲಾರ : ಕತ್ತು ಕೊಯ್ದು ಯುವಕನ  ಕೊಲೆ ಮಾಡಿರುವ ಘಟನೆ ತಾಲೂಕಿನ ಹರಟಿ ಮಲ್ಲಾಂಡಹಳ್ಳಿ ಅರಣ್ಯ ಪ್ರದೇಶದಲ್ಲಿ ನಡೆದಿದೆ. ಕೊಲೆಯಾದ  ಮಲ್ಲಾಂಡಹಳ್ಳಿ ಗ್ರಾಮದ ನಿವಾಸಿ ಮುನಿಯಪ್ಪ ಎಂಬುವವರ ಪುತ್ರ ಮಂಜುನಾಥ್ ಎಂದು ಗುರುತಿಸಲಾಗಿದೆ. 

ಕೊಲೆಯಾದ ಮಂಜುನಾಥ್ ವೃತ್ತಿಗಾಗಿ ಆಟೋ ಓಡಿಸುತ್ತಿದ್ದ.  ಇಂದು ಗ್ರಾಮದ ಸಮೀಪವಿರುವ ಅರಣ್ಯ ಪ್ರದೇಶದಲ್ಲಿ ಮೃತದೇಹ ಸಿಕ್ಕಿದ್ದು, ಸ್ಥಳಕ್ಕೆ ಕೋಲಾರ ಜಿಲ್ಲಾ ಎಸ್ಪಿ. ಡೆಕ್ಕಾ ಕಿಶೋರ್ ಬಾಬು  ಭೇಟಿ ನೀಡಿದ್ದಾರೆ.

ಕೊಲೆಗೆ ಸಂಬಂಧಿಸಿದ ಯಾವುದೇ ಮಾಹಿತಿಗಳು ಲಭ್ಯವಾಗಿಲ್ಲ, ಕೋಲಾರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದು ಪೊಲೀಸರು ತನಿಖೆ ಆರಂಭಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News