ರಾಜ್ಯದಲ್ಲಿಂದು 889 ಮಂದಿಗೆ ಕೊರೋನ ಸೋಂಕು ದೃಢ, 14 ಮಂದಿ ಸಾವು

Update: 2021-09-18 16:57 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಸೆ. 18: ರಾಜ್ಯಾದ್ಯಂತ ಶನಿವಾರ ಒಟ್ಟು 889 ಕೊರೋನ ಪ್ರಕರಣಗಳು ದೃಢಪಟ್ಟಿದ್ದು, 14 ಜನರು ಸೋಂಕಿಗೆ ಬಲಿಯಾಗಿದ್ದು, 1,080 ಜನರು ಗುಣಮುಖರಾಗಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ರಾಜ್ಯದಲ್ಲಿ ಈಗಾಗಲೇ ಒಟ್ಟು ಸೋಂಕಿತರ ಸಂಖ್ಯೆ 29,67,083ಕ್ಕೆ ತಲುಪಿದೆ. ಇಲ್ಲಿಯವರೆಗೆ ಒಟ್ಟು ಸಾವಿನ ಸಂಖ್ಯೆ 37,587ಕ್ಕೆ ಮುಟ್ಟಿದೆ. ಒಟ್ಟು ಸಕ್ರಿಯ ಕೊರೋನ ಪ್ರಕರಣ ಸಂಖ್ಯೆ 15,755ಕ್ಕೆ ಏರಿಕೆಯಾಗಿದ್ದು, ಇವರೆಲ್ಲ ಸೋಂಕಿತರು ಆಸ್ಪತ್ರೆ, ಕೊರೋನ ಕೇರ್ ಸೆಂಟರ್ ಹಾಗೂ ಮನೆಗಳಲ್ಲಿ ಚಿಕಿತ್ಸೆ ಮತ್ತು ಆರೈಕೆಯಲ್ಲಿದ್ದಾರೆ.

14 ಸೋಂಕಿತರು ಬಲಿ: ಬೆಂಗಳೂರು ನಗರ-6 ದಕ್ಷಿಣ ಕನ್ನಡ 2, ಹಾಸನ-1, ಕೋಲಾರ-1, ಶಿವಮೊಗ್ಗ-1, ತುಮಕೂರು-1, ಉಡುಪಿ-2 ಸೇರಿದಂತೆ ಒಟ್ಟು 14 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.

ಎಲ್ಲೆಲ್ಲಿ ಎಷ್ಟು: ಬೆಳಗಾವಿ 13, ಬೆಂಗಳೂರು ನಗರ 263, ಚಾಮರಾಜನಗರ 10, ಚಿಕ್ಕಮಗಳೂರು 25, ಚಿತ್ರದುರ್ಗ 11, ದಕ್ಷಿಣ ಕನ್ನಡ 133, ಹಾಸನ 40, ಕೊಡಗು 45, ಕೋಲಾರ 19, ಮಂಡ್ಯ 18, ಮೈಸೂರು 74, ಶಿವಮೊಗ್ಗ 37, ತುಮಕೂರು 27, ಉಡುಪಿ 86, ಉತ್ತರ ಕನ್ನಡ 44 ಸೇರಿದಂತೆ ರಾಜ್ಯದಲ್ಲಿ ಒಟ್ಟು 889 ಮಂದಿಗೆ ಸೋಂಕಿಗೆ ದೃಢಪಟ್ಟಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News