ಸಿದ್ದರಾಮಯ್ಯ ಅವರಿಂದ ಹಿಂದು ಧರ್ಮದ ಬಗ್ಗೆ ಪಾಠ ಕಲಿಯುವ ಅಗತ್ಯವಿಲ್ಲ: ನಳಿನ್ ಕುಮಾರ್ ಕಟೀಲ್

Update: 2021-09-18 18:00 GMT

ದಾವಣಗೆರೆ: ಸಿದ್ದರಾಮಯ್ಯ ಅವರಿಂದ ಹಿಂದು ಧರ್ಮದ ಬಗ್ಗೆ ಪಾಠ ಕಲಿಯುವ ಅಗತ್ಯವಿಲ್ಲ. ಹಿಂದು ದೇವಸ್ಥಾನಗಳನ್ನ ಒಡೆದ ಟಿಪ್ಪು ಸುಲ್ತಾನ್ ಜಯಂತಿ ಮಾಡಿ ಸಂತೋಷ ಪಟ್ಟವರು ಸಿದ್ದರಾಮಯ್ಯ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ, ಲಿಂಗಾಯತರಲ್ಲಿ ವೀರಶೈವ- ಲಿಂಗಾಯತ ಎಂದು ಒಡೆಯಲು ಹೊರಟಿದ್ದರು. ನಾಸ್ತಿಕರಿಂದ ನಾವು ಪಾಠ ಕಲಿಯಬೇಕಿಲ್ಲ. ದೇವಸ್ಥಾನ ತೆರವು ವಿಚಾರದ ಬಗ್ಗೆ ನಮ್ಮ ಕಾರ್ಯಕಾರಣಿಯಲ್ಲಿ ಚರ್ಚೆ ಆಗುತ್ತದೆ. ನಂಜನಗೂಡು ದೇವಸ್ಥಾನದ ಪುನರ್ ನಿರ್ಮಾಣದ ಬಗ್ಗೆ ಕಾನೂನು ವ್ಯಾಪ್ತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು‌. ನಕಲಿ ಹಿಂದು ವಾದಿಗಳು ಎಂದು ಸಿದ್ದರಾಮಯ್ಯ ಹೇಳಿದ್ದಕ್ಕೆ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

'ಬೆಲೆ ಎರಿಕೆ ಬಗ್ಗೆ ಪ್ರಧಾನಿ ಸೂಕ್ತ ನಿರ್ಧಾರ'
ಬೆಲೆ ಏರಿಕೆ ಈಗ ಮಾತ್ರ ಇಲ್ಲ. ಈ ಹಿಂದೆಯು ಇತ್ತು. ಮೇಲಾಗಿ ರೈತರ ಉತ್ಪಾದನೆಗೆ ಸೂಕ್ತ ಬೆಲೆ ಸಿಗುವ ಬಗ್ಗೆ ಕೂಡಾ ನಿರ್ಧಾರ ಆಗುತ್ತದೆ. ಈ ಬಗ್ಗೆ ಪ್ರಧಾನಿ ಚಿಂತನೆ ಮಾಡುತ್ತಾರೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News