ಬೈಕ್ ನಲ್ಲಿ ಗಾಂಜಾ ಸಾಗಾಟ: ಇಬ್ಬರು ಆರೋಪಿಗಳ ಬಂಧನ

Update: 2021-09-20 12:25 GMT

ಹನೂರು : ಬೈಕ್ ನಲ್ಲಿ ಗಾಂಜಾ ಮಾರಾಟ ಮಾಡಲು ಯತ್ನಿಸಿದ್ದ ಇಬ್ಬರು ಆರೋಪಿಗಳನ್ನು ಅಬಕಾರಿ ಸಿಬ್ಬಂದಿಗಳು ಬಂಧಿಸಿದ್ದಾರೆ

ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಮಾರ್ಟಳ್ಳಿ ವಡಕೆಹಳ್ಳ ರಸ್ತೆಯಲ್ಲಿರುವ ಶ್ರೀ ಆಂಜನೇಯ ದೇವಾಲಯದ ಬಳಿ ರಾಜೇಶ್ ಮತ್ತು ನಾಗರಾಜು ಎಂಬುವವರು ತಮ್ಮ ಬೈಕ್ ನಲ್ಲಿ ಗಾಂಜಾವನ್ನು ಮಾರಾಟ ಮಾಡಲು ಸಾಗಿಸುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯ ಮೇರೆಗೆ ಅಬಕಾರಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ದಾಳಿ ನಡೆಸಿದರು.

ಬಂಧಿತರಿಂದ 2 ಕೆಜಿ 900 ಗ್ರಾಂ ತೂಕದ ಕಚ್ಚಾ ಗಾಂಜಾವನ್ನು ಜಪ್ತಿ ಪಡಿಸಿಕೊಂಡು, ಕೃತ್ಯಕ್ಕೆ ಬಳಸಿದ ಬೈಕನ್ನು ಜಪ್ತಿ ಪಡಿಸಿಕೊಳ್ಳಲಾಗಿದೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಅಬಕಾರಿ ಉಪ ಆಯುಕ್ತ ಮುರಳಿ ಮಾರ್ಗದರ್ಶನದಲ್ಲಿ ದಾಳಿ ನಡೆಯಿತು. ಈ ವೇಳೆ ಸಿದ್ದಯ್ಯ , ಅಬಕಾರಿ ಮುಖ್ಯ ಕಾನ್ಸ್ಟೇಬಲ್ , ಕಾನ್ಸ್ಟೇಬಲ್ಗಳಾದ ಕೆ.ಪ್ರದೀಪ್ ಕುಮಾರ್ , ಎನ್.ಸುಜನ್ರಾಜ್ , ರಮೇಶ.ಎಂ , ಜಯಪ್ರಕಾಶ್.ಎನ್ ಹಾಗೂ ರವಿಕುಮಾರ್.ಬಿ ವಾಹನ ಚಾಲಕರಾದ ಮಂಜುಪ್ರಸಾದ್.ಸಿ ಬಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News