ಐಪಿಎಸ್ ಅಧಿಕಾರಿ ಜಗದೀಶ್ ನಿಧನ

Update: 2021-09-26 15:58 GMT
ಐಪಿಎಸ್ ಅಧಿಕಾರಿ ಜಗದೀಶ್ 

ಬೆಂಗಳೂರು, ಸೆ.26: ಮಾರಣಾಂತಿಕ ಕಾಯಿಲೆಯಿಂದ  ಬಳಲುತ್ತಿದ್ದ ಐಪಿಎಸ್ ಅಧಿಕಾರಿ ಕೆ.ವಿ.ಜಗದೀಶ್ ರವಿವಾರ ನಿಧನರಾಗಿದ್ದಾರೆ.

ಕೆ.ವಿ.ಜಗದೀಶ್ ಅವರು, ಕೆಲ ಸಮಯದಿಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ತದನಂತರ, ನಗರದ ಎಚ್ ಸಿಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ರವಿವಾರ ಸಂಜೆ ನಿಧನರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

2006ರಲ್ಲಿ ಪೊಲೀಸ್ ಸೇವೆಗೆ ಸೇರಿದ್ದ ಜಗದೀಶ್ ಅವರು, 2017ರಲ್ಲಿ ಐಪಿಎಸ್ ಅಧಿಕಾರಿಯಾಗಿ ಮುಂಭಡ್ತಿ ಪಡೆದಿದ್ದರು.ಇನ್ನೂ, ಅನಾರೋಗ್ಯದಿಂದ ಚಿಕಿತ್ಸೆ ಪಡೆಯುತ್ತಿದ್ದ ಕಾರಣ ಯಾವುದೇ ಹುದ್ದೆಯಲ್ಲಿ ಜಗದೀಶ್ ಅವರು ನಿಯೋಜನೆಗೊಂಡಿರಲಿಲ್ಲ ಎಂದು ಹೇಳಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News