ಸಿಪಿಐ ಮುಖಂಡ ದಿ.ಬಿ.ಕೆ.ಸುಂದರೇಶ್ ತಾಯಿ ನಿಧನ

Update: 2021-09-26 16:36 GMT
ನಂಜಮ್ಮ 

ಚಿಕ್ಕಮಗಳೂರು: ಮೂಡಿಗೆರೆ ತಾಲೂಕು ಗೋಣಿಬೀಡು ಹೋಬಳಿ ಬುಕುಡಿ ಗ್ರಾಮದ ದಿವಂಗತ ಕಾಳೇಗೌಡ ಅವರ ಪತ್ನಿ ನಂಜಮ್ಮ (93) ರವಿವಾರ ರಾತ್ರಿ ನಿಧನರಾಗಿದ್ದಾರೆ.

ನಂಜಮ್ಮ ಅವರು ಮಲೆನಾಡಿನ ಹೆಸರಾಂತ ಕಾರ್ಮಿಕ ನಾಯಕ ಹಾಗೂ ಸಿಪಿಐ ಪಕ್ಷದ ಮುಖಂಡ ದಿವಂಗತ ಬಿ.ಕೆ.ಸುಂದರೇಶ್  ಮತ್ತು ಬಿ.ಕೆ.ಲಕ್ಷ್ಮಣ್ ಅವರ ತಾಯಿ. ಮೃತರ ಅಂತ್ಯ ಸಂಸ್ಕಾರ ಸೋಮವಾರ ಮಧ್ಯಾಹ್ನ 3ಗಂಟೆಗೆ ಸ್ವಗ್ರಾಮದಲ್ಲಿ ನಡೆಯಲಿದೆ. 

ಮೂಡಿಗೆರೆ ತಾಲೂಕು ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಆರ್.ಬಾಲಕೃಷ್ಣ, ಡಿ.ಬಿ. ಸುಬ್ಬೇ ಗೌಡ, ಬಿ.ಎಸ್.ಜೈರಾಮ್, ಕೆ.ಡಿ.ಮನೋಹರ್, ಹಳಸೆಶಿವಣ್ಣ, ಎಚ್.ಪಿ.ರೇವಣ್ಣಗೌಡ ಎಚ್.ಪಿ.ದೇವರಾಜು ಸಂತಾಪ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News