ನಂಜನಗೂಡು ದೇಗುಲ ತೆರವು: ತಹಶೀಲ್ದಾರ್ ಮೋಹನ ಕುಮಾರಿ ವರ್ಗಾವಣೆ

Update: 2021-09-27 16:39 GMT

ಮೈಸೂರು, ಸೆ. 27: ಜಿಲ್ಲೆಯ ನಂಜನಗೂಡು ತಾಲೂಕಿನ ಪುರಾತನ ಹುಚ್ಚಗಣಿ ದೇಗುಲ ತೆರವು ಪ್ರಕರಣ ಸಂಬಂಧ ತಹಶೀಲ್ದಾರ್​ ಮೋಹನ ಕುಮಾರಿ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ರಾತ್ರೋ ರಾತ್ರಿ ದೇಗುಲ ತೆರವುಗೊಳಿಸಿದ್ದಾರೆ ಎಂದು ಆರೋಪಿಸಿ ಬಿಜೆಪಿ, ಕಾಂಗ್ರೆಸ್ ಪಕ್ಷ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿತ್ತು. 

ನಂಜನಗೂಡು ತಹಶೀಲ್ದಾರ್ ಅವರ ತಲೆದಂಡ ಮಾಡದಿದ್ದರೆ ಮುಖ್ಯಮಂತ್ರಿ ಮನೆವರೆಗೆ ಪಾದಯಾತ್ರೆ ಮಾಡುವುದಾಗಿ ಪ್ರತಿಭಟನಾಕಾರು ಎಚ್ಚರಿಕೆ ನೀಡಿದ್ದರು. 
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News