ಮೈಸೂರು: ಅಪಘಾತದಲ್ಲಿ ತಾಯಿ-ಮಗ ಮೃತ್ಯು ಪ್ರಕರಣಕ್ಕೆ ತಿರುವು; ಕೊಲೆ ಶಂಕೆ

Update: 2021-10-06 16:01 GMT

ಮೈಸೂರು,ಅ.6: ದಟ್ಟಗಳ್ಳಿ ರಿಂಗ್ ರಸ್ತೆ ಬಳಿ ಬುಧವಾರ ಬೆಳಗಿನ ಜಾವ 4.30 ಸುಮಾರಿಗೆ ಚಲಿಸುತ್ತಿದ್ದ ಕಾರಿನ ಟೈಯರ್ ಸಿಡಿದು ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ತಾಯಿ-ಮಗ ಸ್ಥಳದಲ್ಲೇ ಸಾವನ್ನಪ್ಪಿದ ಪ್ರಕರಣ ಇದೀಗ ತಿರುವು ಪಡೆದಿದ್ದು, ಕೊಲೆ ಎಂದು ಅಂದಾಜಿಸಲಾಗಿದೆ.

ಟೈರ್ ಹೊಡೆದು  ಗುಣಲಕ್ಷ್ಮೀ(35) ಮತ್ತು ಇವರ ಮಗ ದೈವಿಕ್(12) ಎಂಬವರು  ಮೃತಪಟ್ಟಿದ್ದಾರೆ ಎನ್ನಲಾಗಿತ್ತು.  ಆದರೆ ಮೃತರ ಮರಣೋತ್ತರ ಪರೀಕ್ಷೆ ನಡೆಸಿದಾಗ ಅನುಮಾನ ಹುಟ್ಟುವಂತೆ ಮಾಡಿದೆ ಎನ್ನಲಾಗಿದೆ. ಅಷ್ಟೇ ಅಲ್ಲದೆ ದೈವಿಕ್ ಕುತ್ತಿಗೆಯಲ್ಲಿ ದಾರದಿಂದ ನೇಣು ಬಿಗಿದಂತೆ ಗುರುತು ಕಂಡು ಬಂದಿದ್ದು, ಇದೊಂದು ಕೊಲೆ ಎಂಬ ಅನುಮಾನ ವ್ಯಕ್ತವಾಗಿದೆ ಎಂಬ ಮಾಹಿತಿ ಲಭಿಸಿದೆ. 

ಟೈರ್ ಬ್ಲಾಸ್ಟ್ ವೇಳೆ   ಗುಣಲಕ್ಷ್ಮೀ ಮತ್ತು ಮಗು ಸ್ಥಳದಲ್ಲೇ ಸಾವನ್ನಪ್ಪಿದ್ದು ಅವರ ಪತಿ ಜಗದೀಶ್ ಸಣ್ಣಪುಟ್ಟ ಗಾಯಗಳಾಗಿರುವುದು ಪೊಲೀಸರಲ್ಲಿ ಮತ್ತಷ್ಟು ಶಂಕೆಯನ್ನು ಮೂಡಿಸಿದೆ ಎನ್ನಲಾಗಿದೆ.

ಪ್ರಕರಣವನ್ನು ಮೈಸೂರಿನ ಕುವೆಂಪು ನಗರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಆದರೆ ಇದೀಗ ಅಪಘಾತವಲ್ಲ, ವ್ಯವಸ್ಥಿತ ಕೊಲೆ ಸಂಚು ಎಂಬ ಶಂಕೆ ಮೂಡಿದ ಹಿನ್ನೆಲೆಯಲ್ಲಿ ಪ್ರಕರಣವನ್ನು ಕುವೆಂಪು ನಗರ ಪೊಲೀಸ್ ಠಾಣೆಗೆ ಹೆಚ್ಚಿನ ತನಿಖೆಗಾಗಿ ಹಸ್ತಾಂತರಿಸಲಾಗಿದೆ. ಈ ಸಂಬಂಧ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News