×
Ad

ಬೆಂಗಳೂರು; ಬೀದಿ ನಾಯಿಗೆ ಕಲ್ಲೇಟು: ದೂರು ದಾಖಲು

Update: 2021-10-06 22:31 IST

ಬೆಂಗಳೂರು, ಅ.6: ನಾಯಿ ಮೇಲೆ ಕಲ್ಲಿಂದ ಹಲ್ಲೆ ನಡೆಸಿದ್ದಾರೆಂದು ಆರೋಪಿಸಿ ಇಲ್ಲಿನ ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.

ಮಲ್ಲೇಶ್ವರಂ ಆರ್.ವಿ. ಎನ್‍ಕ್ಲೇವ್ ಅಪಾರ್ಟ್‍ಮೆಂಟ್‍ನಲ್ಲಿರುವ ಅನುರಾಧಾ ಎಂಬಾಕೆ ಹಲವು ವರ್ಷಗಳಿಂದ ಬೀದಿ ನಾಯಿಗೆ ಆಹಾರ ನೀಡುತ್ತಿದ್ದಾರೆ. ಆದರೆ, ಇದೇ ಸ್ಥಳದಲ್ಲಿ ಮೃದಲಾ ಎಂಬಾಕೆ ಆ ನಾಯಿಯನ್ನು ಕಲ್ಲಿನಿಂದ ಹೊಡೆದು ಹತ್ಯೆಗೆ ಯತ್ನಿಸಿದ್ದಾರೆ ಎಂದು ಆರೋಪಿಸಿ ಅನುರಾಧಾ ದೂರು ನೀಡಿದ್ದಾರೆ.

ಬಳಿಕ ಅನುರಾಧಾ ವಿರುದ್ಧ ಸರೋಜಾ ಎಂಬುವವರು ಪ್ರತಿದೂರು ದಾಖಲಿಸಿದ್ದು, ಅನುರಾಧಾ ಮತ್ತು ಈಕೆಯ ಪತಿ ನಾಯಿಗಳಿಗೆ ಆಹಾರ ನೀಡಿ, ಸ್ಥಳೀಯ ಜನರಿಗೆ ತೊಂದರೆ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News