ಶಿವಮೊಗ್ಗ: ಕೆಲಸಕ್ಕೆಂದು ತೆರಳುತ್ತಿದ್ದ ಮಹಿಳೆಯ ಕತ್ತು ಸೀಳಿ ಕೊಲೆ

Update: 2021-10-09 16:48 GMT

ಶಿವಮೊಗ್ಗ: ಕೆಲಸಕ್ಕೆಂದು ತೆರಳುತ್ತಿದ್ದ ಮಹಿಳೆಯನ್ನು ನಡು ರಸ್ತೆಯಲ್ಲಿಯೇ ಕತ್ತು ಸೀಳಿ ಕೊಲೆ ಮಾಡಿರುವ ಘಟನೆ ಶಿಕಾರಿಪುರ ತಾಲೂಕಿನ ಕಪ್ಪನಹಳ್ಳಿ ಕ್ಯಾಂಪ್​ ಬಳಿ ನಡೆದಿದೆ.

ಹೇಮಾವತಿ ಎಂಬ ಮಹಿಳೆಯು ಕೆಲಸಕ್ಕಾಗಿ ನಡೆದುಕೊಂಡು ಹೋಗುವ ವೇಳೆ ದುಷ್ಕರ್ಮಿಗಳು ಕೊಲೆಗೈದು ಪರಾರಿಯಾಗಿದ್ದಾರೆ. ಮಹಿಳೆಯ ಕತ್ತು ಸೀಳಿ, ಮಚ್ಚನ್ನು ಸ್ಥಳದಲ್ಲೇ ಬಿಟ್ಟು ಹೋಗಿದ್ದಾರೆ ಎಂದು ತಿಳಿದು ಬಂದಿದೆ.

ಮಹಿಳೆಯು ಶಿಕಾರಿಪುರ ತಾಲೂಕಿನ ಸಂಡದ ಪಶು ಆಹಾರ ಘಟಕದಲ್ಲಿ ದಿನಗೂಲಿ ನೌಕರಳಾಗಿದ್ದರು.  ಈ ಸಂಬಂಧ ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News