ಕೆಎಸ್ಸಾರ್ಟಿಸಿಗೆ ಮತ್ತೆರಡು ಪ್ರಶಸ್ತಿಗಳು

Update: 2021-10-11 17:22 GMT

ಬೆಂಗಳೂರು, ಅ.11: ಸಿಮ್ಯಾಕ್ ಸಂಸ್ಥೆ ವತಿಯಿಂದ ಕೆಎಸಾರ್ಟಿಸಿಗೆ 2018-19ನೇ ಸಾಲಿನ ‘ಫ್ಲೈಬಸ್ ಸೇವೆ’ ಮತ್ತು 2019-20ನೇ ಸಾಲಿನ ‘ಸ್ವಚ್ಛತೆಯೇ ಸೇವೆ' ಅಭಿಯಾನ ಉಪಕ್ರಮಗಳಿಗೆ ಪ್ರಶಸ್ತಿಗಳು ಲಭಿಸಿರುತ್ತದೆ. 

ಕೆಎಸ್‍ಆರ್‍ಟಿಸಿ ಉಪಕ್ರಮಗಳಾದ ‘ಫ್ಲೈಬಸ್ ಸೇವೆ'ಗೆ 2018-19ರ ಮೊದಲನೆ ಮತ್ತು ‘ಸ್ವಚ್ಛತೆಯೇ ಸೇವೆ'ಗೆ 2019-20ನೇ ಸಾಲಿನ ಎರಡನೇ ಬಹುಮಾನವನ್ನು ನೀಡಲಾಗಿದ್ದು, ರೂ 1, ಲಕ್ಷ ಹಾಗೂ ರೂ.75,000ಗಳ ನಗದು ಪ್ರಶಸ್ತಿಗಳನ್ನು ನಗರಾಭಿವೃದ್ಧಿ ಸಚಿವ ಬಿ.ಎ. ಬಸವರಾಜ ಮತ್ತು ಪೌರಾಡಳಿತ ಮತ್ತು ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ಸಚಿವ ಎನ್. ನಾಗರಾಜು ಅವರು ಕೆಎಸ್‍ಆರ್‍ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ.ಕಳಸದ ಅವರಿಗೆ ಪ್ರದಾನ ಮಾಡಿದರು. 

ಈ ಸಂದರ್ಭದಲ್ಲಿ, ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಡಾ. ಎಂ.ಎನ್. ಅಜಯ್ ನಾಗಭೂಷಣ್, ಎಸ್ ಜಯರಾಮ್, ಸಿಮ್ಯಾಕ್‍ನ ಇನ್ನಿತರ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News