ಕೃಷಿ ಸಮ್ಮಾನ್ ಯೋಜನೆಯ ಸದುಪಯೋಗಕ್ಕೆ ಸಚಿವ ಕೋಟ ಕರೆ

Update: 2021-10-16 14:33 GMT

ಮಡಿಕೇರಿ ಅ.16 : ರೈತರು ಬೆಳೆದ ಬೆಳೆಗೆ ಉತ್ತಮ ಬೆಲೆ ಸಿಗುವಂತಾಗಬೇಕು. ಕೃಷಿ ಸಮ್ಮಾನ್ ಯೋಜನೆಯು ಹಲವಾರು ಸೌಲಭ್ಯಗಳನ್ನು ಒದಗಿಸಿಕೊಟ್ಟಿದೆ. ಅದರ ಸದುಪಯೋಗವನ್ನು ಎಲ್ಲಾ ರೈತರು ಪಡೆದುಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವÀ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

 ಕೊಡಗು ಜಿಲ್ಲಾ ಹಾಪ್ ಕಾಮ್ಸ್, ತೋಟಗಾರಿಕೆ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಸಹಕಾರಿ ತೋಟಗಾರಿಕೆ ಮಾರಾಟ ಮಹಾ ಮಂಡಳ ಇವರ ಸಹಯೋಗದೊಂದಿಗೆ ಶನಿವಾರ ನಗರದ ಮುಖ್ಯ ರಸ್ತೆಯಲ್ಲಿ ನಿರ್ಮಿಸಿರುವ ಹಾಪ್‍ಕಾಮ್ಸ್ ನೂತನ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು. 

  ಮಡಿಕೇರಿ ನಗರದ ಹೃದಯ ಭಾಗದಲ್ಲಿ ಹಾಪ್‍ಕಾಮ್ಸ್ ಕಟ್ಟಡ ನಿರ್ಮಾಣ ಮಾಡಿರುವುದು ನಿಜಕ್ಕೂ ಶ್ಲಾಘನೀಯ. ರೈತರು  ಅವಶ್ಯಕವಾಗಿ ಇದರ ಸದ್ಬಳಕೆ ಮಾಡಿಕೊಳ್ಳುವಂತಾಗಬೇಕು ಎಂದು  ಸಚಿವರು ಹೇಳಿದರು.

ಶಾಸಕ ಕೆ.ಜಿ.ಬೋಪಯ್ಯ ಮಾತನಾಡಿ, ರೈತರು ಬೆಳೆದ ಬೆಳೆಗೆ ರೈತರೇ ದರ ನಿಗದಿ ಮಾಡುವಂತಾಗಬೇಕು. ಯಾವ ಮೂಲದಿಂದಲೂ ಅವರಿಗೆ ನಷ್ಟ ಆಗಬಾರದು.  ಜಿಲ್ಲಾ ಹಾಪ್‍ಕಾಮ್ಸ್‍ನಲ್ಲಿ ಕೋಲ್ಡ್ ಸ್ಟೋರೇಜ್ ವ್ಯವಸ್ಥೆಯು ಆದಷ್ಟು ಬೇಗ ಆಗಬೇಕು ಎಂದರು.

ಪ್ರಧಾನಮಂತ್ರಿಯವರ ಕೃಷಿಯೆಡೆಗಿನ ಚಿಂತನೆಗಳು ಅತ್ಯಮೂಲ್ಯವಾಗಿದೆ. ಅವರೊಂದಿಗೆ ನಾವುಗಳು ಕೈ ಜೋಡಿಸಬೇಕು. ಹೊಂದಾಣಿಕೆಯಿಂದ ನಡೆದುಕೊಂಡು ಹೋಗಲಿ ಎಂದು ಶುಭ ಹಾರೈಸಿದರು.

  ವಿಧಾನ ಪರಿಷತ್ ಸದಸ್ಯ ಎಂ.ಪಿ.ಸುನಿಲ್ ಸುಬ್ರಮಣಿ ಮಾತನಾಡಿ, ಸರ್ಕಾರದ ವ್ಯವಸ್ಥೆಯಲ್ಲಿ ಶ್ರಮವಹಿಸಿ ಕಟ್ಟಡವನ್ನು ನಿರ್ಮಾಣ ಮಾಡಲಾಗಿದೆ. ಅದೇ ರೀತಿ ಎಲ್ಲಾ ರೈತರು ಕಟ್ಟಡದ ಸದುಪಯೋಗ ಪಡೆದುಕೊಳ್ಳುವಂತಾಗಲಿ ಎಂದು ಹೇಳಿದರು.

 ಸಚಿವರು ಕೊಡಗಿನಲ್ಲಿ ಅಭಿವೃದ್ಧಿ ಸಂಬಂಧಿಸಿದಂತೆ ಉತ್ತಮ ಸ್ಪಂದನೆಯನ್ನು ನೀಡುತ್ತಾ ಬಂದಿದ್ದಾರೆ, ಇದೇ ರೀತಿ ಮುಂದೆಯೂ ಸಹ ಬೆಂಬಲಿಸಬೇಕಾಗಿ ಕೋರಿಕೊಂಡರು.

ಕೊಡಗು ಜಿಲ್ಲಾ ಹಾಪ್ ಕಾಮ್ಸ್ ಅಧ್ಯಕ್ಷರಾದ ಬಿದ್ದಾಟಂಡ ಎ.ರಮೇಶ್ ಚಂಗಪ್ಪ ಅವರು ಮಾತನಾಡಿ ಹಾಪ್‍ಕಾಮ್ಸ್ ಕಟ್ಟಡ ನಿರ್ಮಾಣವೂ 20 ವರ್ಷದ ಕನಸಾಗಿತ್ತು, ಬಹಳಷ್ಟು ಶ್ರಮವಹಿಸಿ ಕಟ್ಟಡ ನಿರ್ಮಾಣ ಮಾಡಲಾಯಿತು. ಎಲ್ಲರಿಗೂ ಇದರ ಉತ್ತಮ ಸೇವೆ ತಲುಪುವಂತಾಗಲಿ ಎಂದು ಹಾರೈಸಿದರು.

  ರಾಜ್ಯ ಸಹಕಾರಿ ತೋಟಗಾರಿಕೆ ಮಾರಾಟ ಮಹಾ ಮಂಡಳದ ಅಧ್ಯಕ್ಷರಾದ ಡಾ.ಬಿ.ಡಿ.ಭೂಕಾಂತ್ ಅವರು ಮಾತನಾಡಿ ಕೊಡಗಿನ ಕಿತ್ತಳೆ ಒಂದು ಉತ್ತಮ ಬೆಳೆಯಾಗಿದೆ, ಅದಕ್ಕೆ ಉತ್ತಮ ದರ ನಿಗದಿ ಪಡಿಸಿ ನ್ಯಾಯ ಒದಗಿಸಿಕೊಡಬೇಕು ಎಂದರು.

ಪ್ರಧಾನಮಂತ್ರಿಯವರು ಆತ್ಮ ನಿರ್ಭರ ಭಾರತ್ ಯೋಜನೆಯು ರೈತರಿಗೆ ಹಲವು ಸೌಲಭ್ಯಗಳನ್ನು ಒದಗಿಸಿಕೊಟ್ಟಿದೆ. ಪ್ರತಿದಿನವು ನಾವು ರೈತರನ್ನು ನೆನೆಸಿಕೊಳ್ಳಬೇಕು ಏಕೆಂದರೆ, ಇಂದು ನಾವೂ ಆಹಾರ ಸೇವಿಸುತ್ತಿರುವುದು ರೈತರಿಂದಲೆ. ಹಾಲು ಉತ್ಪಾದಕರ ಸಂಘಕ್ಕೆ ಸರ್ಕಾರದಿಂದ ಬೆಂಬಲ ಸಿಕ್ಕಾಗ ಅದು ಯಶಸ್ಸುಗಳಿಸಲು ಸಾಧ್ಯವಾಯಿತು, ಅದೇ ರೀತಿ ಹಾಪ್‍ಕಾಮ್ಸ್‍ಗೂ ಸಹ ಸರ್ಕಾರದ ಬೆಂಬಲ ದೊರಕಬೇಕು ಎಂದು ಹೇಳಿದರು.

 ರಾಜ್ಯದಲ್ಲಿ 23 ಹಾಪ್ ಕಾಮ್ಸ್‍ಗಳಿದ್ದು, 11 ಹಾಪ್‍ಕಾಮ್ಸ್‍ಗಳಿಗೆ ಮೊಬೈಲ್ ವಾಹನದ ವ್ಯವಸ್ಥೆಯಿರುತ್ತದೆ. ಕೊಡಗು ಜಿಲ್ಲೆಗೂ ಸಹ ಆದಷ್ಟು ಬೇಗ ಮೊಬೈಲ್ ವಾಹನದ ವ್ಯವಸ್ಥೆ ಸಿಗುವಂತಾಗಲಿ ಎಂದು ಶುಭ ಹಾರೈಸಿದರು.

 ಕರ್ನಾಟಕ ರಾಜ್ಯ ಪಶ್ಚಿಮ ಘಟ್ಟಗಳ ಸಂರಕ್ಷಣಾ ಕಾರ್ಯಪಡೆ ಸಮಿತಿ ಅಧ್ಯಕ್ಷರಾದ ಶಾಂತೆಯಂಡ ರವಿಕುಶಾಲಪ್ಪ, ರಾಜ್ಯ ಸಹಕಾರಿ ತೋಟಗಾರಿಕೆ ಮಾರಾಟ ಮಹಾ ಮಂಡಳದ ಉಪಾಧ್ಯಕ್ಷರಾದ ಸೂರ್ಯಕುಮಾರ್, ರಾಜ್ಯ ಸಹಕಾರಿ ತೋಟಗಾರಿಕೆ ಮಾರಾಟ ಮಹಾ ಮಂಡಳದ ವ್ಯವಸ್ಥಾಪಕ ನಿರ್ದೇಶಕರಾದ ಎಚ್.ಎನ್.ಹೇಮ, ಮಡಿಕೇರಿ ಸಹಕಾರ ಇಲಾಖೆಯ ಉಪ ನಿಬಂಧಕರಾದ ಬಿ.ಕೆ.ಸಲೀಂ, ಕೊಡಗು ಜಿಲ್ಲಾ ಹಾಪ್ ಕಾಮ್ಸ್ ಸಂಘದ ಆಡಳಿತ ಮಂಡಳಿಯ ನಿರ್ದೇಶಕರುಗಳಾದ ಎಸ್.ಪಿ ಪೊನ್ನಪ್ಪ, ಬೇಬಿ ಪೂವಯ್ಯ, ಲೀಲಾ ಮೇದಪ್ಪ, ಕೋಣೇರಿರ ಎಂ.ಮನೋಹರ್, ಎಂ.ಡಿ.ಸುವಿನ್ ಗಣಪತಿ, ಪಾಡಿಯಮ್ಮನ ಎ.ಮಹೇಶ್, ಕೆ.ಪೂವಪ್ಪ ನಾಯ್ಕ, ಡಿ.ಹೆಚ್.ಉಮೇಶ್ ರಾಜ್ ಅರಸ್, ಎಚ್.ಎಂ.ಸುಧೀರ್,   ಬಿ.ಎ.ಹರೀಶ್, ಸತೀಶ್ ಕಾಂಗೀರ ಎನ್, ಪದನಿಮಿತ್ತ ವ್ಯವಸ್ಥಾಪಕ ನಿರ್ದೇಶಕರು ಕೊಡಗು ಜಿಲ್ಲಾ ಹಾಪ್ ಕಾಮ್ಸ್ ಹಾಗೂ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಪ್ರಮೋದ್ ಸಿ. ಎಂ, ಕೊಡಗು ಜಿಲ್ಲಾ ಹಾಪ್ ಕಾಮ್ಸ್ ಮುಖ್ಯಕಾರ್ಯನಿರ್ವಾಹಕರಾದ  ಗಿರೀಶ್, ಕೊಡಗು ಜಿಲ್ಲಾ ಹಾಪ್ ಕಾಮ್ಸ್‍ನ ಮಾರಾಟ ಸಹಾಯಕರಾದ ಮಹಾಲಿಂಗೇಗೌಡ.ಎಲ್, ಡಿಸಿಸಿ ಬ್ಯಾಂಕ್ ಮನುಮುತ್ತಪ್ಪ ಇತರರು ಪಾಲ್ಗೊಂಡಿದ್ದರು.

 ಆರ್.ಮಂಜುಳ ಪ್ರಾರ್ಥಿಸಿ, ನಿರೂಪಿಸಿದರು, ನಾಗೇಶ್ ಕುಂದಲ್ಪಾಡಿ ಸ್ವಾಗತಿಸಿದರು, ಮಧು ದೇವಯ್ಯ ವಂದಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News