ಮೀಲಾದುನ್ನಬಿ; ರಾಜ್ಯಾದ್ಯಂತ ಅ.19ರಂದು ರಜೆ
Update: 2021-10-17 06:25 GMT
ಬೆಂಗಳೂರು: ಮೀಲಾದುನ್ನಬಿ (ಪ್ರವಾದಿ ಜನ್ಮದಿನ) ಪ್ರಯುಕ್ತ ಸಾರ್ವತ್ರಿಕ ರಜೆಯ ದಿನಾಂಕವನ್ನು ಸರಕಾರ ಬದಲಾವಣೆ ಮಾಡಲಾಗಿದ್ದು, ಅ.19ರಂದು (ಮಂಗಳವಾರ) ರಜೆ ಘೋಷಿಸಲಾಗಿದೆ.
ರಾಜ್ಯ ಸರಕಾರ ಅ.20ರಂದು ಘೋಷಿಸಿದ್ದ ರಜೆಯನ್ನು ರದ್ದುಗೊಳಿಸಿ ಸೆಂಟ್ರಲ್ ಮೂನ್ ಕಮಿಟಿ ಅಭಿಪ್ರಾಯದಂತೆ ಅ.19 (ಮಂಗಳವಾರ)ಕ್ಕೆ ರಾಜ್ಯಾದ್ಯಂತ ಸಾರ್ವತ್ರಿಕ ರಜೆ ಘೋಷಿಸಿ ಬದಲಾವಣೆ ಮಾಡಲಾಗಿದೆ ಎಂದು ಪ್ರಕಟನೆ ತಿಳಿಸಿದೆ.