ಪಾವಗಡ: ಹೆರಿಗೆ ವೇಳೆ ಮಹಿಳೆ ಸಾವು; ವೈದ್ಯರ ನಿರ್ಲಕ್ಷ್ಯ ಆರೋಪ
Update: 2021-10-18 11:17 GMT
ಪಾವಗಡ: ಹೆರಿಗೆ ವೇಳೆ ಮಹಿಳೆಯೋರ್ವರು ಮೃತಪಟ್ಟಿದ್ದು, ಪಾವಗಡದ ಖಾಸಗಿ ಆಸ್ಪತ್ರೆಯಲ್ಲಿ ಇಂದು ಬೆಳಿಗ್ಗೆ ನಡೆದಿದೆ.
ಪಾವಗಡ ತಾಲೂಕಿನ ರಾಜವಂತಿ ಗ್ರಾಮದ ರಾಜೇಂದ್ರ ಎಂಬವರ ಪತ್ನಿ ಹೇಮಲತ ಎಂಬುವರು ರವಿವಾರ ಖಾಸಗಿ ಆಸ್ಪತ್ರೆಗೆ ಹೆರಿಗೆಗಾಗಿ ದಾಖಲಾಗಿದ್ದರು.
ಹೆರಿಗೆ ವೇಳೆ ಹೇಮಲತಾ ಎಂಬ ಮಹಿಳೆ ವೈದ್ಯರ ನಿರ್ಲಕ್ಷ್ಯದಿಂದಾಗಿ ಮೃತಪಟ್ಟಿದ್ದಾರೆ ಎಂದು ಮಹಿಳೆ ಸಂಬಂಧಿಕರು ಆರೋಪಿಸಿದ್ದಾರೆ.
ಮೃತಪಟ್ಟಿರುವ ಹೇಮಲತಾ ಮೃತದೇಹವನ್ನು ಬೇರೆ ಆಸ್ಪತ್ರೆಗೆ ರವಾಸನಿಸಲು ಕೂಡ ವೈದ್ಯರು ಪ್ರಯತ್ನಿಸಿದ್ದಾರೆ ಎಂದು ಆರೋಪಿಸಿರುವ ಮೃತ ಮಹಿಳೆಯ ಸಂಬಂಧಿಕರು ಆಸ್ಪತ್ರೆಯ ಖುರ್ಚಿ, ಟೇಬಲ್ ಗಳನ್ನು ಧ್ವಂಸಗೊಳಿಸಿದ್ದಾರೆ.
ವೈದ್ಯರ ನಿರ್ಲಕ್ಷ್ಯ ಕ್ಕೆ ಪೋಷಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.