ವಿವೇಕ ರೈ, ಜಯಂತ ಕಾಯ್ಕಿಣಿ, ಎಂ.ಎಸ್.ಆಶಾದೇವಿ ಸೇರಿ ಏಳು ಜನರಿಗೆ ‘ಮಾಸ್ತಿ ಪ್ರಶಸ್ತಿ’

Update: 2021-10-20 15:17 GMT

ಬೆಂಗಳೂರು, ಅ.20: ಡಾ. ಮಾಸ್ತಿ ವೆಂಕಟೇಶ ಅಯ್ಯಂಗಾರ್ ಟ್ರಸ್ಟ್ ವತಿಯಿಂದ ನೀಡಲಾಗುವ 2021ನೇ ಸಾಲಿನ ‘ಮಾಸ್ತಿ ಪ್ರಶಸ್ತಿ’ ಪ್ರಕಟಗೊಂಡಿದ್ದು, ವಿದ್ವಾಂಸ ಬಿ.ಎ.ವಿವೇಕ ರೈ, ಕವಿ ಜಯಂತ ಕಾಯ್ಕಿಣಿ ಸೇರಿದಂತೆ ಏಳು ಮಂದಿ ಸಾಧಕರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿನ ಸಾಧನೆಯನ್ನು ಪರಿಗಣಿಸಿ, ಟ್ರಸ್ಟ್‍ನ ಅಧ್ಯಕ್ಷ ಮಾನಿನಕೆರೆ ರಂಗನಾಥನ್ ನೇತೃತ್ವದಲ್ಲಿ ಈ ಆಯ್ಕೆ ನಡೆಸಲಾಗಿದೆ.

ಪುರಸ್ಕೃತರು: ಬಿ.ಎ.ವಿವೇಕ ರೈ(ಜಾನಪದ), ಜಯಂತ ಕಾಯ್ಕಿಣಿ(ಕಾವ್ಯ), ಮಾಧವ ಕುಲಕರ್ಣಿ(ವಿಮರ್ಶೆ), ಆರ್.ವಿಜಯರಾಘವನ್(ಕಾವ್ಯ), ಎಂ.ಎಸ್.ಆಶಾದೇವಿ(ವಿಮರ್ಶೆ), ವಸುಮತಿ ಉಡುಪ(ಸೃಜನಶೀಲ) ಮತ್ತು ಎಚ್.ಎಲ್.ಪುಷ್ಪಾ(ಕಾವ್ಯ) ಅವರು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಪ್ರಶಸ್ತಿಯು ತಲಾ ರೂ.25 ಸಾವಿರ ನಗದು, ಮಾಸ್ತಿ ಪ್ರಶಸ್ತಿ ಫಲಕ ಹಾಗೂ ಸನ್ಮಾನ ಒಳಗೊಂಡಿದೆ. ಪ್ರೊ.ಎಂ.ಎಚ್.ಕೃಷ್ಣಯ್ಯ, ಜಿ.ಎನ್.ರಂಗನಾಥರಾವ್, ಬಿ.ಆರ್.ಲಕ್ಷ್ಮಣರಾವ್, ಕೃಷ್ಣಮೂರ್ತಿ ಹನೂರು, ಉಷಾ ಕೇಸರಿ ಹಾಗೂ ಡಿ.ಎಂ. ರವಿಕುಮಾರ್ ಆಯ್ಕೆ ಸಮಿತಿಯಲ್ಲಿ ಇದ್ದರು. ನ.6ರಂದು ಬೆಂಗಳೂರಿನ ಭಾರತೀಯ ವಿದ್ಯಾಭವನ ಸಭಾಂಗಣದಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ ಎಂದು ಟ್ರಸ್ಟ್‍ನ ಅಧ್ಯಕ್ಷ ಮಾವಿನಕೆರೆ ರಂಗನಾಥನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News