ಉಳ್ಳಾಲ; ಪ್ರವಾದಿ ಮುಹಮ್ಮದ್ (ಸ)ವಚನ ಸಂದೇಶ ಕಾರ್ಯಕ್ರಮ

Update: 2021-10-21 11:02 GMT

ಉಳ್ಳಾಲ: ಜಮಾತೆ ಇಸ್ಲಾಮಿ ಹಿಂದ್  ಉಳ್ಳಾಲ,ಪೊಸಕುರಲ್ ಬಳಗ, ಸದ್ಭಾವನಾ ವೇದಿಕೆ ಹಾಗೂ ಲಯನ್ಸ್ ಕ್ಲಬ್ ಫೆರ್ಮನ್ನೂರು ಇದರ  ಸಂಯುಕ್ತ ಆಶ್ರಯದಲ್ಲಿ  ಆರಂಭ ಗೊಂಡಿರುವ ಪ್ರವಾದಿ ಮುಹಮ್ಮದ್ (ಸ) ಅತ್ಯುತ್ತಮ ಮಾದರಿ ಅಭಿಯಾನ ಪ್ರಯುಕ್ತ ಪ್ರವಾದಿ ಮುಹಮ್ಮದ್ (ಸ)ವಚನ ಸಂದೇಶ ಕಾರ್ಯಕ್ರಮವು  ಕೊಲ್ಯ  ಬ್ರಹ್ಮಶ್ರೀ  ಶ್ರೀ ನಾರಾಯಣ ಗುರು ಸಭಾಂಗಣದಲ್ಲಿ ನಡೆಯಿತು.

ನಿವೃತ್ತ ಮುಖ್ಯೋಪಾಧ್ಯಾಯ ರವೀಂದ್ರ ರೈ ಮಾತನಾಡಿ  ಪ್ರವಾದಿ ಮುಹಮ್ಮದ್ ಪೈಗಂಬರ್ ಉತ್ತಮ ಸಾಧನೆ ಮಾಡಿದವರು.ಅವರ ಉಪದೇಶವನ್ನು ನಾವು ಪಾಲನೆ ಮಾಡಬೇಕು ಎಂದು ಸಂದೇಶ ನೀಡಿದರು.

ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿದ್ದ ಜಮಾತೆ ಇಸ್ಲಾಮಿ ಹಿಂದ್ ರಾಜ್ಯ ಕಾರ್ಯದರ್ಶಿ ಮುಹಮ್ಮದ್ ಕುಂಞಿ ರವರು  ಪ್ರವಾದಿ ಮುಹಮ್ಮದ್ ಪೈಗಂಬರ್ ರವರ ಜೀವನ ದ ಬಗ್ಗೆ ಸಂದೇಶ ನೀಡಿದರು.

ಕಾರ್ಯಕ್ರಮದಲ್ಲಿ ಇಬ್ರಾಹಿಂ ಕೋಡಿಜಾಲ್, ಜೆಸಿಐ ಮಂಗಳ ಗಂಗೋತ್ರಿ  ಅಧ್ಯಕ್ಷ ಫ್ರಾಂಕ್ಲಿನ್ ಫ್ರಾನ್ಸಿಸ್ ಕುಟ್ಟಿನ್ಹ, ಪೊಸಕುರಲ್ ನಿರ್ದೇಶಕ ವಿದ್ಯಾಧರ ಶೆಟ್ಟಿ, ಪೆರ್ಮನ್ನೂರು ಲಯನ್ಸ್ ಕ್ಲಬ್ ಅಧ್ಯಕ್ಷ ಅರುಣ್ ಮೊಂತೆರೊ , ಉಳ್ಳಾಲ ಜಮಾಅತೆ ಇಸ್ಲಾಮಿ ಹಿಂದ್ ಉಪಾಧ್ಯಕ್ಷ ಎ.ಹೆಚ್ ಮಹ್ ಮೂದ್,   ನಿವೃತ್ತ ಮುಖ್ಯೋಪಾಧ್ಯಾಯ ರವೀಂದ್ರ ರೈ ಹರೇಕಳ, 
ಪಿ.ಎ. ಕಾಲೇಜು ಪ್ರೊಫೆಸರ್ ಯಮುಹಮ್ಮದ್ ಮುಬೀನ್  ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.
ಮುಝಮ್ಮಿಲ್ ಅಹ್ಮದ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News